ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂ ಸಂಗನಬಸವ ಶ್ರೀಗಳ ಹೆಸರು ಇಡಲು ಒತ್ತಾಯ
ಇಂಡಿ : ತಾಲೂಕಿನ ತಾಂಬಾ ಗ್ರಾಮದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ಬಂಥನಾಳದ ಶಿಕ್ಷಣ ಕ್ರಾಂತಿ ಹರಿಕಾರ ಲಿಂಗೈಕ್ಯ ಸಂಗನಬಸವ ಶ್ರೀಗಳ ಹೆಸರು ಇಡಲು ಜೆಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರು ಪಕ್ಷಾತೀತವಾಗಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಮಂಗವಾರ ಬಂಥನಾಳ ಮಠದಲ್ಲಿ ವೃಷಭಲಿಂಗೇಶ್ವರ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿಸಿದ ರಾಷ್ಟ್ರ ಧ್ವಜಾರೋಣವನ್ನು ನೇರವರಿಸಿ ಮಾತನಾಡಿ ೧೯೨೩ರಲ್ಲಿ ಸ್ವಾತಂತ್ರö್ಯ ಚಳವಳಿ ಸಂದರ್ಭದಲ್ಲಿ ಕರ್ನಾಕದ ಗಾಂದಿ ಹರ್ಡೇಕರ್ ಹೇರಾದ ಮಂಜಪ್ಪನವರಿAದ ಬಂಥನಾಳ ಮಠದಲ್ಲಿ ಭಕ್ತ ಸಮುದಾಯದ ಸಮ್ಮುಖದಲ್ಲಿ ರಾಷ್ಟಿçÃಯ ದೀಕ್ಷೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಹರ್ಡೇಕರ್ ಮಂಜಪ್ಪನವರು ಶೈಕ್ಷಣಿಕ ಕ್ರಾಂತಿಗೈದ ಬಂಥನಾಳದ ಲಿಂಗೈಕ್ಯ ಸಂಗನಬಸವ ಮಾಹಾಶಿವಯೋಗಿಗಳಿಂದ ಧರ್ಮ ದೀಕ್ಷ ಪಡೆದರು. ಅಂದಿನಿAದಲೂ ಶ್ರೀಗಳು ಖಾದಿ ವಸ್ತçಧಾರಿ ಗಳಾದರು. ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣಕ್ಕೆ ಪ್ರಾಶಸ್ತö್ಯವಿಟ್ಟು ದೇಶಾಭಿಮಾನ ಮೂಡಿಸಿದರು. ಪುರಾಣ ಪ್ರವಚನ ಹೇಳಿ ಭಕ್ತರು ನೀಡಿದ ದೇಣಿಗೆಯಲ್ಲಿ ವಿದ್ಯಾರ್ಥಿಗಳೇ ದೇವರು, ವಿದ್ಯಾಲಯಗಳೇ ದೇವಾಲಯ ಎಂದು, ಶಾಲೆ ಕಾಲೇಜ್ ಕಟ್ಟುವ ಮೂಲಕ ಈ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಗೈದ ಬಂಥನಾಳದ ಲಿಂಗೈಕ್ಯ ಸಂಗನಬಸವ ಮಾಹಾಶಿವಯೋಗಿಗಳು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯ. ಸಂಗನಬಸವ ಶ್ರೀಗಳು ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬAತೆ ಬಾಲ್ಯದಲ್ಲೇ ಅಪೂರ್ವ ತೇಜಸ್ತು, ಹಸನ್ಮುಖತೆ, ವಿದ್ಯಾಭ್ಯಸದಲ್ಲಿ ತನ್ಮಯತೆ ಮೈಗೂಡಿಸಿಕೊಂಡು ಬೆಳೆದರು. ಶೈಕಣೀಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದ ಕೀರ್ತಿ ಸಂಗನಬಸವ ಶ್ರೀಗಳಿಗೆ ಸಲ್ಲುತ್ತದೆ. ಈ ಭಾಗದ ತಾಂಬಾ, ಸಿಂದಗಿ, ಇಂಡಿ, ಲಚ್ಯಾಣ, ಜಮಖಂಡಿ, ರಬಕವಿ, ಬನಹಟ್ಟಿ, ಮೋರಟಗಿ, ಮಸೂತಿ, ಹಿರೇರೂಗಿ, ಅಗರಖೇಡ, ನೀಂಬಾಳ, ಮಹಾಲಿಂಗಪುರ, ತಿಕೋಟಾ, ಇಂಗಳೇಶ್ವರ, ವಂದಾಲ, ದೇವಣಗಾಂವ, ಚಡಚಣ, ಹೊರ್ತಿ, ನಿವರಗಿ, ಸಾಲೋಟಗಿ, ಬಳ್ಳೊಳ್ಳಿ, ಅಮಿನಗಡ್ಡ, ಮತ್ತು ವಿಜಯಪುರ ಮೊದಲಾದ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.
ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಡಿ. ಪಾಟೀಲ, ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಪಾಲ್ಗೊಂಡಿದ್ದರು.
ತಾಂಬಾ ಸಮೀಪದ ಬಂಥನಾಳ ಮಠದಲ್ಲಿ ವೃಷಭಲಿಂಗೇಶ್ವರ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿಸಿದ ರಾಷ್ಟ್ರ ಧ್ವಜಾರೋಣವನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ನೆರವೇರಿಸುತ್ತಿರುವುದು.

ತಾಂಬಾ ಸಮೀಪದ ಬಂಥನಾಳ ಮಠದಲ್ಲಿ ವೃಷಭಲಿಂಗೇಶ್ವರ ಸಾಂಸ್ಕೃತಿಕ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರು.



















