ಸರಕಾರದ ಸವಲತ್ತುಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯ
ಇಂಡಿ : ಅಗಸ್ಟ ತಿಂಗಳಲ್ಲಿ ಆದ ಹೆಚ್ಚಿನ ಮಳೆಯಿಂದ ಹಾನಿ ಉಂಟಾದ ಬೆಳೆಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯ ಆಗ ಮಾತ್ರ ಸರಕಾರದ ಸವಲತ್ತು ದೊರಕುತ್ತವೆ ಎಂದು ಕೃಷಿ ಉಪನಿರ್ದೇಶಕ ಚಂದ್ರಕಾAತ ಪವಾರ ಮತ್ತು ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ. ತಾಲೂಕಿನ ಗೊರನಾಳ ಗ್ರಾಮದ ಹೊಲಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮತ್ತು ರೈತರೊಂದಿಗೆ ಮಾತನಾಡಿದರು.
ಬೆಳೆ ಸಮೀಕ್ಷೆ ಮೋಬೈಲ್ ಅಪ್ಲಿಲೇಶನ್ ಬಳಸಿ ಸಮೀಕ್ಷೆ ಮಾಡುವುದರ ಮೂಲಕ ಬೆಳೆ ಪ್ರದೇಶದ ನಿಖರ ಅಂಕಿ ಅಂಶಗಳನ್ನು ಕ್ರೂಢೀಕರಣ ಮಾಡಲಾಗುವುದು.
ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸೆರೆಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಬೆಳೆ ಪರಿಹಾರ ನೀಡಲು, ಬೆಳೆ ಪ್ರದೇಶದ ಅಂದಾಜು ಮಾಡಲು, ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ಬಳಸಲಾಗುತ್ತದೆ.
ಪರಿಹಾರ ಸಮಯದಲ್ಲಿ ಮಾರ್ಗಸೂಚಿಯಂತೆ ಬೆಳೆ ಪರಿಹಾರ ನೀಡಲು ಬಳಸಲಾಗುವದು.
ಬೆಳೆ ವಿಮೆ ಯೋಜನೆಯಡಿಯಲ್ಲಿ ರೈತರಿಗೆ ವಿಮೆ ಪರಿಹಾರ ಪಾವತಿ ಮಾಡಲು ಬಳಸಲಾಗುವುದು.
ಬ್ಯಾಂಕುಗಳಲ್ಲಿರೈತರಿಗೆ ಬೆಳೆ ಸಾಲವನ್ನು ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶವನ್ನು ಪರಿಗಣಿಸಿ ಮಂಜೂರಾತಿ ನೀಡಲು ಬಳಸಲಾಗುವದು. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಪರಿಹಾರ ಧನವನ್ನು ವಿತರಿಸಲು ಬಳಸಲಾಗುವದು.
ತಾಲೂಕಾ ಆಡಳಿತದಿಂದ ಕ್ಷೇತ್ರ ಸಿಬ್ಬಂಧಿಗಳಿಗೆ ಕೃಷಿ ಅಧಿಕಾರಿ, ಕಂದಾಯ ನಿರೀಕ್ಷಕರು, ಸಹಾಯಕ ಕೃಷಿ ಅಧಿಕಾರಿ, ಗ್ರಾಮ ಲೆಕ್ಕಿಗರು, ತೋಟಗಾರಿಕೆ ಮತ್ತು ರೇಷ್ಮೆ ಅಧಿಕಾರಿಗಳು ಗ್ರಾಮಗಳನ್ನು ಹಂಚಿಕೆ ಮಾಡಿ, ಪ್ರತಿ ಗ್ರಾಮಕ್ಕೆ ತಂತ್ರಾAಶದ ಜ್ಞಾನವುಳ್ಳ ಸ್ಥಳಿಯ ನಿವಾಸಿಯನ್ನು ನಿಯೋಜಿಸಿ ಸರ್ಕಾರಿ ಸಿಬ್ಬಂಧಿಯ ಮೇಲ್ವಿಚಾರಣೆಯಲ್ಲಿ ಸರ್ಕಾರವು ನಿಗದಿಪಡಿಸಿರುವ ಅವಧಿಯಲ್ಲಿಯೇ “ಬೆಳೆ ಸಮೀಕ್ಷೆ ಆ್ಯಪ್” ಬಳಸಿ ಬೆಳೆ ಮಾಹಿತಿ ಸಂಗ್ರಹಿಸಲಾಗುವುದು.
ಬೆಳೆ ಸಮೀಕ್ಷೆ ಕೈಗುಳ್ಳುವ ಸಮಯದಲ್ಲಿ ಅಥವಾ ನಂತರದಲ್ಲಿ ಬೆಳೆ ದಂತ್ತಾAಶದ ಕುರಿತು ಮರುಪರಿಶೀಲಿಸಲು ಅಥವಾ ಬೆಳೆಯನ್ನು ತಪ್ಪಾಗಿ ನಮೂದಿಸಿರುವುದು ಕಂಡು ಬಂದಲ್ಲಿ ರೈತರು ಇಲಾಖೆಯಿಂದ ಅಭಿವೃದ್ದಿಪಡಿಸಿರುವ ಬೆಳೆ ದರ್ಶಕ ಆ್ಯಪ್ ಅಥವಾ ಅಪ್ಲೀಕೆಷನ್ ಮೂಲಕ ಅಕ್ಷೇಪಣೆಗಳನ್ನು ನಮೂದಿಸಬಹುದಾಗಿದೆ ಎಂದು ಪವಾರ ಮತ್ತು ಏವೂರರವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡಿ ತಾಲೂಕಿನ ಗೊರನಾಳ ಗ್ರಾಮದಲ್ಲಿ ಬೆಳೆ ಸಮೀಕ್ಷೆಯಲ್ಲಿ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಮತ್ತು ಮಹಾದೇವಪ್ಪ ಏವೂರ ಚಿತ್ರದಲ್ಲಿದ್ದಾರೆ..



















