Aug-19 ರಂದು ಶ್ರೀ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಆ. ೧೯ ರಂದು ಜರುಗಲಿವೆ.
ಈ ನಿಮಿತ್ಯ ಬೆಳಿಗ್ಗೆ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಶ್ರೀ ಶಂಕರಲಿAಗ ಮಹಾಶಿವಯೋಗಿಗಳ ಕತೃ ಗದ್ದುಗೆಗೆ, ಶ್ರೀ ಸಂಗನಬಸವ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ, ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ, ವಿಶೇಷ ಪೂಜೆ ನಡೆಯಲಿದೆ.
ಬಳಿಕ ಸಂಜೆ ೫ ಗಂಟೆಗೆ ಸ್ಥಳಿಯ ಸದ್ಭಕ್ತರಾದ ಮಲ್ಲಿಕಾರ್ಜುನ ಮುಜಗೊಂಡ ಮನೆತನದವರಿಂದ ಸಂಪ್ರದಾಯದಂತೆ ತೊಟ್ಟಿಲು ಸೇವೆ ನಡೆಯಲಿದೆ.
ಈ ನಿಮಿತ್ಯ ಮುಜಗೊಂಡ ಅವರ ಮನೆಯಿಂದ ಮಠದ ವರೆಗೆ ಶ್ರೀ ಸಿದ್ಧಲಿಂಗ ಮಹಾರಾಜರ ಬೆಳ್ಳಿಯ ಮೂರ್ತಿಯ ಮೆರವಣ ಗೆಯು ಕಕ್ಕಳಮೇಲಿಯ ಭಜನಾ ಕಲಾತಂಡ, ಸ್ಥಳಿಯ ಭಜನಾ ಕಲಾ ತಂಡಗಳ ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿಂದ ನೆರವೇರಲಿದೆ. ಬಳಿಕ ತೊಟ್ಟಿಲೋತ್ಸವ ಕಾರ್ಯಕ್ರಮ ಮಠದ ಸಂಪ್ರದಾಯದಂತೆ ಅಕ್ಕನಬಳಗದವರ ಜೋಗುಳ ಪದದೊಂದಿಗೆ ಸಂಭ್ರಮದಿಂದ ನೆರವೇರಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.