ಚಾರಿತ್ರ್ಯದ ಬದುಕು ರೂಪಿಸಿಕೊಳ್ಳಲು ನಿರಂತರ ಓದು ಅಗತ್ಯ- ಸಂತೋಷ ಬಂಡೆ
ಹೊರ್ತಿ: ಶೈಕ್ಷಣಿಕ ವರ್ಷದ ಆರಂಭದಿಂದಲೇ ಮಕ್ಕಳು ಛಲ, ಶಿಸ್ತು, ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವದೊಂದಿಗೆ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿ ಯಶಸ್ಸು ಪಡೆದು, ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ಇಲ್ಲಿನ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯ 58 ನೇ ಶಾಲಾ ವಾರ್ಷಿಕೋತ್ಸವ ಮತ್ತು 2025-26 ನೇ ಸಾಲಿನ 10 ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶಿಸ್ತುಬದ್ಧ ವೇಳಾಪಟ್ಟಿಯೊಂದಿಗೆ ಏಕಾಗ್ರಚಿತ್ತದಿಂದ ಓದಿಗೆ ಗಮನನೀಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಇಂದಿನ ಪೀಳಿಗೆ ಮೊಬೈಲ್, ಟಿವಿ ದಾಸರಾಗದೇ ಪುಸ್ತಕದ ಸ್ನೇಹಿತರಾಗಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿ, ವಿದ್ಯಾಭಿರುಚಿ ಹೊಂದಬೇಕು ಎಂದು ಹೇಳಿದರು.
ಕಷ್ಟಪಟ್ಟು ಪರೀಕ್ಷೆಗಾಗಿ ಓದದೇ, ಇಷ್ಟಪಟ್ಟು ಚಾರಿತ್ರ್ಯದ ಬದುಕನ್ನು ರೂಪಿಸಿಕೊಳ್ಳಲು ನಿರಂತರವಾಗಿ ಓದಬೇಕು.
ಅಂಕಕ್ಕಿಂತ ಜೀವನ ಮುಖ್ಯ ಎಂದರಿತು ವಿದ್ಯಾರ್ಥಿಗಳು ಜೀವನದ ಗುರಿಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.
‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಸಂಸ್ಕೃತಿ, ಸಂಸ್ಕಾರ ನೀಡುತ್ತಿರುವ ರೇವಣಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಖೈನೂರ ಮಾತನಾಡಿ, ‘ವಿದ್ಯಾರ್ಥಿಗಳು ಉತ್ತಮ ಗುರಿ ಇಟ್ಟು ಕೊಂಡು ಛಲದಿಂದ ಮುಂದಿನ ಉನ್ನತ ಶಿಕ್ಷಣ ಕಲಿತು, ಸಾಧನೆಗೈದು ಉನ್ನತ ಹುದ್ದೆ ಪಡೆದುಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಎಂ ಬಿ ಅಂಕಲಗಿ, ಎಸ್ ಎಸ್ ಪೂಜಾರಿ ಪಾರಿತೋಷಕ ವಿತರಿಸಿ ಮಾತನಾಡಿದರು.
ಪಪೂ ಕಾಲೇಜಿನ ಪ್ರಾಚಾರ್ಯ ಪಿ ವ್ಹಿ ಮಾಳೋತ್ತರ, ಉಪಪ್ರಾಚಾರ್ಯ ಎ ಎಸ್ ತೇಲಿ, ಕಲಾ ಕಾಲೇಜಿನ ಪ್ರಾಂಶುಪಾಲ ಎಸ್ ಎಂ ಸುಂಟ್ಯಾಳ, ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್ ಎಂ ಬಿರಾದಾರ, ಎಚ್ ಪಿ ಎಸ್ ಶಾಲೆಯ ಮುಖ್ಯ ಶಿಕ್ಷಕ ಆರ್ ಎಚ್ ಮಿರಗಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸುನೀಲ ಕ್ಷತ್ರಿ,ಸಾಂಸ್ಕೃತಿಕ ಕಾರ್ಯದರ್ಶಿ ಬಿ ಆರ್ ಹಿರೇಮಠ ಸೇರಿದಂತೆ ಶಾಲಾ ನಿರ್ದೇಶಕರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
ಶ್ರೀ ರೇವಣಸಿದ್ಧೇಶ್ವರ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಎ.ಎಸ್.ತೇಲಿ ಸ್ವಾಗತಿಸಿದರು, ಜೆ ವೈ ತಾಳಿಕೋಟಿ ನಿರೂಪಿಸಿ, ವಂದಿಸಿದರು.
Photo 20Horti 1ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಪ್ರೌಢ ಶಾಲೆಯ 58ನೇ ಶಾಲಾ ವಾರ್ಷಿಕೋತ್ಸವ ಹಾಗೂ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಶುಕ್ರವಾರ
ಶ್ರೀ ರೇವಣಸಿದ್ದೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ ಎಸ್.ಖೈನೂರ ಮತ್ತು ನಾಗಠಾಣ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷಕುಮಾರ ಬಂಡೆ ಜೊತೆಯಾಗಿ ಉದ್ಘಾಟಿಸಿದರು.
Photo 20Horti2 ಚಿತ್ರಾವಳಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ… ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಪ್ರೌಢ ಶಾಲೆಯ 58ನೇ ಶಾಲಾ ವಾರ್ಷಿಕೋತ್ಸವ ಹಾಗೂ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶುಕ್ರವಾರ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.


















