ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು : ಮಾಜಿ ವಿಪ ಸದಸ್ಯ ಅರುಣ ಶಹಾಪೂರ
ಇಂಡಿ: ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ರಂಗಗಳಲ್ಲಿಯೂ ಸಾಧನೆ ಮಾಡಬೇಕು ಅಂದರೆ ಮಾತ್ರ ಅದು ಸಾಧನೆ. ಆ ನಿಟ್ಟಿನಲ್ಲಿ ಬೋಧನೆ ಮಾಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.
ಶನಿವಾರ ನಗರದ ಸಿಂದಗಿ ರಸ್ತೆಯ ಸತ್ಯಜ್ಯೋತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಾಯಿ ಪಬ್ಲಿಕ್ ಸ್ಕೂಲ್ ಹಾಗೂ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎರಡು ದಿನಗಳ ಕಾಲ ಜರುಗಿದ ೧೬ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೇಶದ ಆಸ್ತಿ. ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಅವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಮಕ್ಕಳಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಗೋಪಾಲ ದೇಶಪಾಂಡೆ ಮಾತನಾಡಿ, ಈ ಸಂಸ್ಥೆಯು ಗಣ್ಯರನ್ನು ಸತ್ಕರಿಸಿರುವುದು ಸಂಸ್ಥೆಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ. ಮಕ್ಕಳು ಶಿಕ್ಷಣದ ಜೊತೆಗೆ ಒಳ್ಳೆಯ ಆಚಾರ, ವಿಚಾರ, ಸಂಸ್ಕೃತಿ ರೂಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮಂತ ಇಂಡಿ ಮಾತನಾಡಿ, ಸಾಧನೆ ಮಾಡಲು ಶಿಕ್ಷಣ ಮುಖ್ಯವಲ್ಲ. ಸಾಧಿಸುವ ಛಲವೊಂದಿದ್ದರೆ ಶಿಕ್ಷಣದ ಜೊತೆಗೆ ಏನಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್. ಎಸ್. ಕಲಘಟಗಿ ಮಾತನಾಡಿ, ಕಳೆದ ೧೬ ವರ್ಷಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ತಾಲೂಕ ಹಂತದಲ್ಲಿ ಜಿಲ್ಲಾ ಹಂತದಲ್ಲಿ ರಾಜ್ಯ ಹಂತದಲ್ಲಿ ಸಾಧನೆಯನ್ನು ಮಾಡುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಶ್ರಮ ಮುಖ್ಯವಾಗಿದೆ. ಆ ಒಂದು ಶ್ರಮದಿಂದ ಇಂದು ನಮ್ಮ ಶಾಲೆ ಇಂಡಿ ಪಟ್ಟಣದಲ್ಲಿ ಒಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದ್ದು, ಶಾಲಾ ಮತ್ತು ಕಾಲೇಜುಗಳಲ್ಲಿ ಒಟ್ಟು ೧೫೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ನಿದರ್ಶನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ನಿವೃತ್ತ ಶಿಕ್ಷಕ ಎಂ.ಎA. ಪೂಜಾರಿ, ಡಾ. ಅನೀಲ ವಾಲಿ, ಗೋಪಾಲ ದೇಶಪಾಂಡೆ, ಶಿವಣ್ಣ ಚೌಡಿಹಾಳ, ಅವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಸಂಜೀವಕುಮಾರ ಧನಪಾಲ, ಕಾರ್ಯದರ್ಶಿ ಶಿವಾನಂದ ಕೊಪ್ಪದ, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ರವೀಂದ್ರ ನಿಗಡಿ, ರಾಜಶೇಖರ ಪೂಜಾರಿ, ಸಿದ್ದರಾಮಪ್ಪಾ ಲಬ್ಬಾ, ಸದಾನಂದ ಬಿರಾದಾರ, ಸೋಮಶೇಖರ ಸುರಪುರ, ರೇವಣಸಿದ್ದಪ್ಪ ಪಾಟೀಲ, ಸಚಿನ ಕಾಳಗಿ, ಈಶ್ವರಲಿಂಗ ಕಲಘಟಗಿ ಪ್ರಾಚಾರ್ಯ ವಿವೇಕಾನಂದ ಬಿ.ಎಚ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುರೇಖಾ ಮದರಖಂಡಿ, ಲಕ್ಷ್ಮೀ ದೇಸಾಯಿ ನಡೆಸಿಕೊಟ್ಟರು.
ಇಂಡಿ: ನಗರದ ಸಿಂದಗಿ ರಸ್ತೆಯ ಸತ್ಯಜ್ಯೋತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಾಯಿ ಪಬ್ಲಿಕ್ ಸ್ಕೂಲ್ ಹಾಗೂ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಎರಡು ದಿನಗಳ ಕಾಲ ಜರುಗಿದ ೧೬ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಉದ್ಘಾಟಿಸಿದರು.


















