ವಾತ್ಸಲ್ಯ ಮನೆ ನೀಡುವ ಮೂಲಕ ಸೂರು ಇಲ್ಲದವರ ಬಾಳಿಗೆ ಬೆಳಕಾಗಿದೆ
ಇಂಡಿ: ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಸೂರು ಇಲ್ಲದೆ ಅರ್ಥಿಕವಾಗಿ ಸಾಕಷ್ಟು ಬಡತನ ಅನುಭವಿಸುತ್ತಿರುವ ಫಲಾನುಭವಿಗಳಿಗೆ ವಾತ್ಸಲ್ಯ ಮನೆ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದೆ ಎಂದು ಕಲಬುರಗಿ ವಲಯದ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಹೇಳಿದರು.
ಅವರು ಬುಧವಾರ ತಾಲೂಕಿನ ಸಾಲೋಟಗಿ ವಲಯದ ಮಿರಗಿ ಕಾರ್ಯ ಕ್ಷೇತ್ರದಲ್ಲಿ ಧರ್ಮಸ್ಥಳ ಯೋಜನೆಯಿಂದ ಮಾಶಾಸನ ಫಲಾನಿಭವಿಯಾದ ನರಸವ್ವ ಹೂಗಾರ ಅವರಿಗೆ ವಾತ್ಸಲ್ಯ ಯೋಜನೆ ವತಿಯಿಂದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಯೋಜನೆಯಲ್ಲಿ ಸುಮಾರು ೮೦೦ ವಾತ್ಸಲ್ಯ ಮನೆ ನಿರ್ಮಾಣ ಮತ್ತು ೧೮೦೦೦ ಫಲಾನುಭವಿಗಳಿಗೆ ಮಾಶಾಸನ ನೀಡುತ್ತಿದ್ದೇವೆ. ಈಗಾಗಲೇ ನರಸವ್ವ ಹೂಗಾರ ಒಂದು ಸಾವಿರ ರೂ ಮಾಶಾಸನ ಪಡೆಯುತ್ತಿದ್ದಾರೆ ಎಂದರು.
ಗ್ರಾ.ಪA ಸದಸ್ಯ ಶ್ರೀಕಾಂತ ಖಸ್ಕಿ ಸರಕಾರ ಮಾಡದೇ ಇರುವ ಕೆಲಸ ಧರ್ಮಸ್ಥಳ ಸಂಸ್ಥೆಯವರು ಮಾಡುತ್ತಿದ್ದಾರೆ ಎಂದರು.
ತಾಲೂಕಿನ ಸಂಸ್ಥೆಯ ಯೋಜನಾಧಿಕಾರಿ ನಟರಾಜ ಎಲ್.ಎಮ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ನಾಗರತ್ನ ಅಥನೂರ, ಸಿದ್ದರಾಮ ಹಳ್ಳುರ, ಕಲ್ಯಾಣಿ ಹಿಟ್ನಳ್ಳಿ, ಚಿದಾನಂದ ಆಲಮೇಲ, ಬಸವರಾಜ ಖಸ್ಕಿ, ದೇವೆಂದ್ರ ಬರಡೋಲ, ಚಂದ್ರಮ ಶಿವಪೂರ, ಚಿದಂಬರ ಪಾಟೀಲ, ಅನಿತಾ ಆಲಮೇಲ, ಮಣಿಕಂಠ, ರೇಖಾ ಪ್ರೇಮಾ ಮತ್ತಿತರರಿದ್ದರು..
ಇಂಡಿ: ತಾಲೂಕಿನ ಮಿರಗಿ ಕಾರ್ಯ ಕ್ಷೇತ್ರದಲ್ಲಿ ಧರ್ಮಸ್ಥಳ ಯೋಜನೆಯಿಂದ ಮಾಶಾಸನ ಫಲಾನಿಭವಿಯಾದ ನರಸವ್ವ ಹೂಗಾರ ಅವರಿಗೆ ವಾತ್ಸಲ್ಯ ಯೋಜನೆ ವತಿಯಿಂದ ಮನೆ ಹಸ್ತಾಂತರ ಮಾಡಿದರು.



















