ರಾಯಚೂರು: ಕೆ.ಐ.ಎ.ಡಿ.ಬಿ. ಇಂಡಸ್ಟ್ರೀಯಲ್ ಏರಿಯಾ ಮತ್ತು ಆರ್.ಟಿ.ಪಿ.ಎಸ್. ವೈ.ಟಿ.ಪಿ.ಎಸ್.ಸ್ಥಾಪನೆಗೆ ಭೂ ಸ್ವಾಧೀನವಾಗಿರುವ ಗ್ರಾಮಗಳಲ್ಲಿ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಭಾಗ್ಯ ಜ್ಯೋತಿ ಯೋಜನೆಯಡಿಯಲ್ಲಿ ಉಚಿತವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಆರ್.ಟಿ.ಪಿ.ಎಸ್. ಶಕ್ತಿನಗರ ಮತ್ತು ವೈ.ಟಿ.ಪಿ.ಎಸ್. ಯರಮರಸ್ ಹಾಗೂ ಕೆ.ಐ.ಎ.ಡಿ.ಬಿ. ಕೈಗಾರಿಕಾ ಕಾರ್ಖಾನೆಗಳ ನಿರ್ಮಾಣ ಮಾಡಲು ಈ ಭಾಗದ ರೈತರು ಸಾವಿರಾರು ಎಕರೆ ಜಮೀನುಗಳನ್ನು ನೀಡಿರುತ್ತಾರೆ. ಆರ್.ಟಿ.ಪಿ.ಎಸ್. ಸ್ಥಾಪನೆಗೆ ನೂರಾರು ಎಕರೆ ಜಮೀನು ಭೂ ಸ್ವಾಧೀನವಾಗಿರುವ ಗ್ರಾಮಗಳಾದ ಯದ್ಲಾಪೂರು, ಕಾಡ್ಲೂರು, ಕರೆಕಲ್, ರಂಗಾಪೂರು, ಹೆಗ್ಗಸನಹಳ್ಳಿ, ಬೇವಿನಬೆಂಚಿ, ನಾಗಲಾಪೂರು ಮತ್ತು ದೇವಸೂಗೂರು ಈ ಗ್ರಾಮಗಳ ರೈತರು ಆರ್.ಟಿ.ಪಿ.ಎಸ್. ಸ್ಥಾಪನೆಗೆ ಜಮೀನುಗಳನ್ನು ನೀಡಿರುತ್ತಾರೆ.ವೈ.ಟಿ.ಪಿ.ಎಸ್. ಸ್ಥಾಪನೆಗೆ ನೂರಾರು ಎಕರೆ ಜಮೀನುಗಳು ಭೂ ಸ್ವಾಧೀನವಾಗಿರುವ ಏಗನೂರು, ಚಿಕ್ಕಸೂಗೂರು, ವಡ್ಲೂರು, ಚಿಕ್ಕವಡ್ಲೂರು, ಹೆಗ್ಗಸನಹಳ್ಳಿ, ಸಂಕನೂರು, ಯರಮರಸ್ ಹಾಗೂ ಕುಕನೂರು ಈ ಗ್ರಾಮಗಳ ರೈತರು ವೈ.ಟಿ.ಪಿ.ಎಸ್. ಸ್ಥಾಪನೆಗೆ ನೂರಾರು ಎಕರೆ ಜಮೀನುಗಳನ್ನು ನೀಡಿರುತ್ತಾರೆ. ಹಾಗೂ ಕೆ.ಐ.ಎ.ಡಿ.ಬಿ. ಕೈಗಾರಿಕಾ ಕಾರ್ಖಾನೆಗಳ (ಇಂಡಸ್ಟ್ರೀಯಲ್ ಏರಿಯಾ) ನಿರ್ಮಾಣಕ್ಕೆ ಸಾವಿರಾರು ಎಕರೆ ಜಮೀನುಗಳು ಈ ಭಾಗದ ರೈತರು ನೀಡಿದ್ದಾರೆ.ಆರ್.ಟಿ.ಪಿ.ಎಸ್, ವೈ.ಟಿ.ಪಿ.ಎಸ್, ಮತ್ತು ಕೆ.ಐ.ಎ.ಡಿ.ಬಿ. ಗಳಿಗೆ ಭೂಸ್ವಾಧೀನವಾಗಿರುವ ಸಾವಿರಾರು ಎಕರೆ ಜಮೀನುಗಳಲ್ಲಿ ಈ ಭಾಗದ ಬಡ ಕೂಲಿಗಾರರು ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದರು. ಆದರೆ ಈ ಭಾಗದ ಬಡ ಕೂಲಿಕಾರರು ಕೂಲಿ ಕೆಲಸವಿಲ್ಲದೆ ತಮ್ಮ ಕುಟುಂಬಗಳ ಪೋಷಣೆ ಹಾಗೂ ಜೀವನ ಸಾಗಿಸಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಬಡ ಕುಟುಂಬಗಳ ಮನೆಗಳಿಗೆ ವಿದ್ಯುತ್ ಬಿಲ್ ಪ್ರತಿ ತಿಂಗಳು ರೂ. ೮ ನೂರು ರಿಂದ ೧೫ ನೂರು ವರೆಗೆ ಬರುತ್ತದೆ. ಇದರಿಂದ ಬಡ ಕುಟುಂಬಗಳು ವಿದ್ಯುತ್ ಬಿಲ್ ಪಾವತಿಸಲು ನಾನಾ ರೀತಿಯ ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಆರ್.ಟಿ.ಪಿ.ಎಸ್. ವೈ.ಟಿ.ಪಿ.ಎಸ್. ಮತ್ತು ಕೆ.ಐ.ಎ.ಡಿ.ಬಿ. ಕೈಕಾರಿಕಾ ಕಾರ್ಖಾನೆಗಳಿಗೆ (ಇಂಡಸ್ಟ್ರಿಯಲ್ ಏರಿಯಾ) ಭೂ ಸ್ವಾಧೀನ ವಾಗಿರುವುದರಿಂದ ಈ ಭಾಗದ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಭಾಗ್ಯ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಆನಂದ ಏಗನೂರು, ದೇವೇಂದ್ರಪ್ಪ ಗುರ್ಜಾಪೂರು, ಪ್ರಕಾಶ ಕುಮಾರ,ವಿ.ಎಸ್.ಯಲ್ಲಪ್ಪ,ಸೇರಿದಂತೆ ಇತರರು ಉಪಸ್ಥಿತರಿದ್ದರು.