ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ಯುವಕ..! ಯುವಕನಗಾಗಿ ಅಗ್ನಿಶಾಮಕ ಹುಡುಕಾಟ..!
ಇಂಡಿ : ಆಯಾತಪ್ಪಿ ಕಾಲು ಜಾರಿ, ಕಾಲುವೆಯಲ್ಲಿ ಯುವಕ ಬಿದ್ದಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇ ಮಸಳಿ ಹತ್ತೀರ ನಡೆದಿದೆ.
ಹೌದು ತಾಲ್ಲೂಕಿನ ಹಿರೇರೂಗಿ ಗ್ರಾಮದ 28 ವರ್ಷದ ಯುವಕ ಮಹಾದೇವ ಶರಣಪ್ಪ ಮುಂಡೋಡಗಿ ಕಾಲುವೆ ನೀರಲ್ಲಿ ಬಿದ್ದು ನೀರುಪಾಲಾದ ಘಟನೆ ನಡೆದಿದೆ. ಇನ್ನೂ ಆತ್ ಹಿರೇಮಸಳಿ ಹತ್ತೀರ ಇರುವ ಮುಖ್ಯ ಕಾಲುವೆಯಿಂದ ತನ್ನ ಹೊಲಗದ್ದೆಗೆ ಮೋಟಾರು ಮೂಲಕ ನೀರು ಹರಿಸುವ ಸಲುವಾಗಿ ಕಾಲುವೆಗೆ ತೆರಳಿದ್ದ, ಈ ಸಂದರ್ಭದಲ್ಲಿ ಆಯಾತಪ್ಪಿ ಹರಿಯುವ ನೀರಲ್ಲಿ ಬಿದ್ದಿದ್ದಾನೆ. ಈಗಾಗಲೇ ಆತನ ಶೊಧಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡಿಸಿದೆ.
ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..