ಇಂಡಿ: ಆಟವಾಡಲು ಹೋಗಿದ್ದ ಬಾಲಕ ನೀರಿನ ಟಾಕಿಯಲ್ಲಿ ಬಿದ್ದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡದಿದೆ
ಸಾಲೋಟಗಿ ಗ್ರಾಮದ ನಿವಾಸಿ ಮೂರು ವರ್ಷದ ರಾಹುಲ್ ಘತ್ತರಗಿ ಮೃತಪಟ್ಟಿದ್ದಾನೆ. ಮನೆಯ ಹತ್ತಿರ ಹೊಸದಾಗಿ ನಿರ್ಮಿಸಿದ ನೀರಿನ ಟ್ಯಾಂಕನಲ್ಲಿ ಆಟವಾಡಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮನೆ ಕಟ್ಟಡ ಮಾಡುತ್ತಿರುವ ಮನೆಯ ಮಾಲೀಕ ಟ್ಯಾಂಕ ನಿರ್ಮಿಸಿದ್ದು, ಅದರಲ್ಲಿ ಯಾವುದೆ ರೀತಿಯ ಮುಚ್ಚಳಿಕೆ ಹಾಕದೇ ಇರುವುದಕ್ಕೆ ಈ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.