ತಡರಾತ್ರಿ ಡಾಬಾಗೆ ನುಗ್ಗಿ ಮೂವರ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನರು
ಕಲಬುರಗಿ ನಗರದ ಹೊರವಲಯದ ಡಾಬಾದಲ್ಲಿ ತ್ರಿವಳಿ ಕೊಲೆ ನಡೆದಿದೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮೂವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಪಟ್ಟಣ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ತ್ರಿಬಲ್ ಮರ್ಡ್ರನಿಂದ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.
ಡಾಬಾ ಮಾಲೀಕ ಸಿದ್ಧಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಕೊಲೆಯಾದವರು ಎಂದು ಗುರುತಿಸಲಾಗಿದೆ. ಈ ಮೂವರು ಸಂಬಂಧಿಕರಾಗಿದ್ದು, ಮಂಗಳವಾರ ತಡರಾತ್ರಿ 12:30 ರಿಂದ 1 ಗಂಟೆ ಹೊತ್ತಲ್ಲಿ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಇವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು. ಸಬ್ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಕಾರಲ್ಲಿ ಬಂದ ಹಂತಕರ ಗ್ಯಾಂಗ್ ಮಾರಕಾಸ್ತ್ರಗಳ ಜೊತೆಗೆ ದಾಬಾಗೆ ನುಗ್ಗಿ ಡಾಬಾ ಮಾಲೀಕ ಸೇರಿ ಮೂವರ ಮೇಲೆ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ರಾಮಚಂದ್ರನನ್ನು ಬೆನ್ನಟ್ಟಿ, ಡಾಬಾ ಹಿಂದಿನ ಜಮೀನಿನಲ್ಲಿ ಕೊಚ್ಚಿ ಕೊಲೆಗೈದಿದ್ದಾರೆ. ಮೂವರ ಮುಖ, ಕೈ, ದೇಹದ ಮೇಲೆ ಭಯಾನಕ ದಾಳಿ ಮಾಡಿ ಪರಾರಿಯಾಗಿದ್ದಾರೆ.
*ವರ್ಷದ ಹಿಂದೆ ನಡೆದ ಕೊಲೆಗೆ ಪ್ರತೀಕಾರ?* ಒಂದು ವರ್ಷದ ಹಿಂದೆ ಎಣ್ಣೆ ಜಗಳ ವಿಚಾರಕ್ಕೆ ನಡೆದಿದ್ದ ಕೊಲೆಗೆ ಪ್ರತೀಕಾರವಾಗಿ ತ್ರಿಬಲ್ ಮರ್ಡರ್ ನಡೆದಿದೆ ಎನ್ನಲಾಗಿದೆ.
ಇದೇ ಡ್ರೈವರ್ ಡಾಬಾದಲ್ಲಿ ಕಳೆದ ವರ್ಷ ನವೆಂಬರ್ 12 ರಂದು ಸೋಮು ತಾಳಿಕೋಟಿ ಎಂಬುವರ ಕೊಲೆಯಾಗಿತ್ತು. ಎಣ್ಣೆ ಬಿಲ್ ವಿಚಾರಕ್ಕೆ ಜಗಳ ನಡೆದು ಕೊಲೆ ನಡೆದಿತ್ತು. ಬಳಿಕ ಸೋಮು ಮೃತದೇಹ ಕಲಬುರಗಿ ಸಿಟಿ ಸಮೀಪ ಎಸೆಯಲಾಗಿತ್ತು. ಕೊಲೆ ಕೇಸ್ ನಲ್ಲಿ ಈಗ ಮರ್ಡರ್ ಆಗಿರುವ ಸಿದ್ದಾರೂಢ ಸೇರಿ ಇತರರು ಜೈಲು ಸೇರಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದು ಸಿದ್ದಾರೂಢ ಮತ್ತೆ ಡಾಬಾ ಓಪನ್ ಮಾಡಿದ್ದರು. ಸೋಮು ಕೊಲೆಗೆ ಪ್ರತೀಕಾರವಾಗಿ ಡಾಬಾಗೆ ನುಗ್ಗಿ ಈಗ ಕೊಲೆ ಮಾಡಲಾಗಿದೆ. ಸದ್ಯ ಕೊಲೆಯಾದ ಮೂವರು ಸಂಬಂಧಿಕರು ಎಂದು ತಿಳಿದುಬಂದಿದೆ.
11 ಜನರ ವಿರುದ್ಧ ಎಫ್ಐಆರ್: ಈ
ಕೊಲೆ ಪ್ರಕರಣ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ರಾಚಣ್ಣಾ ತಾಳಿಕೋಟಿ, ಕಾಂತು ತಾಳಿಕೋಟಿ, ನಾಗರಾಜ್ ತಾಳಿಕೋಟಿ, ಈರಣ್ಣ ತಾಳಿಕೋಟಿ ಸೇರಿ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು, ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ *ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ತಿಳಿಸಿದ್ದಾರೆ*