ಬಿ.ಎಸ್.ಪಿ. ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಝಳಕಿ ನೇಮಕ
ಅಫಜಲಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿ.ಎಸ್.ಪಿ. ಪ್ರಗತಿ ಪರಿಶೀಲನಾ ಸಭೆಯು ಅಫಜಲಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಡಾ. ಶಾಂತಮಲ್ಲ ಹೊನ್ನಂಗೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ ಬಳೂರ್ಗಿ ಗ್ರಾಮದ ಶಾಹು ನಗರದ ಬಸವರಾಜ ಝಳಕಿ ಅವರನ್ನು ಬಿ.ಎಸ್.ಪಿ. ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಅಫಜಲಪುರ ತಾಲೂಕು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಸಂಯೋಜಕರಾದ ಎಲ್.ಆರ್. ಬೊಸಲೆ ಅವರು ಅಧಿಕೃತವಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕವಾದ ಬಸವರಾಜ ಝಳಕಿ ಅವರು ಮಾತನಾಡಿ
“ಪಕ್ಷವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನು. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಪಿ. ಪಕ್ಷವನ್ನು ಬಲಪಡಿಸುವುದಕ್ಕೆ ಸಮರ್ಪಿತವಾಗಿ ಕೆಲಸ ಮಾಡುತ್ತೇನೆ. ಗ್ರಾಮ ಮಟ್ಟದಿಂದ ಸಂಘಟನೆ ಶಕ್ತಿಯನ್ನು ಹೆಚ್ಚಿಸಿ, ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಪ್ರಮುಖ ಗುರಿಯಾಗಿದೆ. ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ನಿಷ್ಠೆಯಿಂದ ಶ್ರಮಿಸುತ್ತೇನೆ,” ಎಂದು ಜಿಲ್ಲಾ ಉಪಾಧ್ಯಕ್ಷ ಬಸವರಾಜ ಝಳಕಿ ಹೇಳಿದರು.
ಸಭೆಯಲ್ಲಿ ಬಿ.ಎಸ್.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಕಿನ್ನೂರ, ರಾಜ್ಯ ಕಾರ್ಯದರ್ಶಿ ಡಾ. ಅನೀಲ ಟೆಂಗಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮೈಲಾರಿ ಸೆಳ್ಳಗಿ, ಜಿಲ್ಲಾ ಅಧ್ಯಕ್ಷ ಶಿವಯೋಗಿ ಹಡಗಿಲ್ ಸೇರಿದಂತೆ ಮುಖಂಡರಾದ ಶರಣು ಹೊಸ್ಮನಿ, ಆನಂದ ನಿಲೂರ, ಪ್ರಕಾಶ ಆಲೇಗಾಂವ್, ಭೀಮಾಶಂಕರ ದಪ್ಪೇದಾರ, ಅಬ್ದುಲ್ ಚೌಧರಿ, ಜಗದೀಶ ಪಾಟೀಲ, ಭೀಮಾಶಂಕರ ಕರಜಗಿ ಹಾಗೂ ಆನಂದ ಹಣಮನೂರ ಉಪಸ್ಥಿತರಿದ್ದರು.