ಹಿರಿಯ ಪತ್ರಕರ್ತರೊಂದಿಗೆ ಅಶೋಕ ಯಡಳ್ಳಿ ಭರ್ಜರಿ ಪ್ರಚಾರ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಟಿವಿ9 ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಪರವಾಗಿ ಭರ್ಜರಿ ಪ್ರಚಾರ ನಡೆಸಲಾಯಿತು. ನಗರದ ಜಿಲ್ಲಾ ಪಂಚಾಯತ ರಸ್ತೆ ಪಕ್ಕದಲ್ಲಿರುವ ಪಂಚಮುಖಿ ದೇವಸ್ಥಾನದಲ್ಲಿ ಹಿರಿಯ ಪತ್ರಕರ್ತರೊಂದಿಗೆ ಪ್ರಚಾರ ಪತ್ರಗಳಿಗೆ ಪೂಜೆ ಸಲ್ಲಿಸಿದ ಅಭ್ಯರ್ಥಿ ಅಶೋಕ ಯಡಳ್ಳಿ ಪ್ರಚಾರ ಕಾರ್ಯ ಕೈಗೊಂಡರು. ಹಿರಿಯ ಪತ್ರಕರ್ತರಾದ ವಾಸುದೇವ ಹೆರಕಲ್ಲ, ಗೋಪಾಲ ನಾಯಕ, ಸುಶಿಲೇಂದ್ರ ನಾಯಕ ಸೇರಿದಂತೆ ಹಲವರಿಗೆ ಕರಪತ್ರಗಳನ್ನು ನೀಡಿ ಮತ ನೀಡುವಂತೆ ಅಭ್ಯರ್ಥಿ ಅಶೋಕ ಯಡಳ್ಳಿ ಮನವಿ ಮಾಡಿದರು.
ಈ ವೇಳೆ ಪತ್ರಕರ್ತರಾದ ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಇಂದುಶೇಖರ ಮಣೂರ, ಶರಣು ಮಸಳಿ, ಚಿದಂಬರ ಕುಲಕರ್ಣಿ, ಪವನ ಕುಲಕರ್ಣಿ, ಗೋಪಾಲ ಕಣ್ಣಿಮಣಿ, ರಾಹುಲ ಆಪ್ಟೆ, ಗುರುರಾಜ ಗದ್ದನಕೇರಿ, ಶಶಿಕಾಂತ ಮೆಂಡೆಗಾರ ಸಾಥ್ ನೀಡಿದರು.
ಕಳೆದ 18 ವರ್ಷಗಳಿಂದ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಈ ಬಾರಿ ಕಾನಿಪ ಸಂಘದ ಜಿಲ್ಲಾ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಲು ಅವಕಾಶ ಕೊಡಬೇಕು. ಜಿಲ್ಲೆಯ ಎಲ್ಲ ಪತ್ರಕರ್ತರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನಗೆ ಬೆಂಬಲಿಸಬೇಕು.
.ಅಶೋಕ ಯಡಳ್ಳಿ, ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ.
ಜಿಲ್ಲೆಯಲ್ಲಿ ಬದ್ಧತೆಯನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಯಡಳ್ಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಖುಶಿಯ ವಿಚಾರ. ನಮ್ಮೆಲ್ಲರ ಬೆಂಬಲ ನಿಮಗೆ ಇರಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ, ಸಂಘಕ್ಕಾಗಿ ಶ್ರಮಿಸಿ.
ಗೋಪಾಲ ನಾಯಕ ಹಾಗೂ ವಾಸುದೇವ ಹೆರಕಲ್ಲ. ಹಿರಿಯ ಪತ್ರಕರ್ತರು.


















