ಶಾಂತೇಶ ನಗರದ ಗಾರ್ಡನಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಇಂಡಿ : ನಗರದ ಶಾಂತೇಶ ಮಹಿಳಾ ವಿವಿದೊದ್ದೇಶ, ಸಾಮಾಜಿಕ ಸಂಘದವರು ಶಾಂತೇಶ ನಗರದಲ್ಲಿ ಇರುವ ಗಾರ್ಡನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕರ ಯಶವಂತರಾಯಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿರುವ ಶಾಂತೇಶ ನಗರದ ಗಾರ್ಡನ್ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ 150 ರಿಂದ 200 ರವರೆಗೆ ಮಹಿಳೆಯರು ಚಂದಾ ಸಂಗ್ರಹಿಸಿ, 5 ದಿನಗಳ ಗಣೇಶ ಪ್ರತಿಷ್ಠಾಪನೆ ಮಾಡಿ, ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡಿ, ನಗರದಲ್ಲಿರುವ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ.
ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಮಹಿಳೆಯರ ಏಳಿಗೆ ಸ್ವಾವಲಂಬಿ ಜೀವನ ನಡೆಸಲು, ಶಾಂತೇಶ ಮಹಿಳಾ ವಿವಿದೊದ್ದೇಶ, ಸಾಮಾಜಿಕ ಸಂಘ ಸದಾ ಬದ್ಧವಾಗಿದ್ದು, ತಮ್ಮ ಮೂಲಕ ನಮಗೆ ಮೂಲಭೂತ ಸೌಕರ್ಯ, ಅಭಿವೃದ್ಧಿ ಮಾಡಿಕೊಡಬೇಕು ಎಂದು ಶಾಸಕರಿಗೆ ವಿನಂತಿಸಿದರು.
ಶಾಂತೇಶ ನಗರದಲ್ಲಿರುವ ಗಾರ್ಡನ್ ಹಳೆಯದಾಗಿದ್ದು, ಅಭಿವೃದ್ಧಿ ಕಾಣದೆ ಬಿಕೋ ಎನ್ನುತ್ತಿದೆ. ಇದರ ಸುತ್ತಲೂ 200 ಕ್ಕಿಂತ ಹೆಚ್ಚಿಗೆ ಮಹಿಳೆಯರು, ಮಕ್ಕಳು ಹಾಗೂ ವಯೋದ್ದರು, ಇದ್ದು ಅವರಿಗೆ ಮೂಲಭೂತ ಸೌಕರ್ಯಗಳು ಒದಗಿಸಿ ಸದರಿ ಜನರಿಗೆ ಸಾಯಂಕಾಲ, ಬೆಳಿಗ್ಗೆ ವಾಕಿಂಗ್ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ಗಾರ್ಡನ್ ಗೆ ಬೇಕಾದ ಬೇಡಿಕೆಗಳು,ನಗರದ ಜನರಿಗೆ ವಾಕಿಂಗ್ ಮಾಡಲು ವಾಕಿಂಗ್ ಟ್ರ್ಯಾಕ್, ಆಯಾಸವಾದಾಗ ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ, ಮಕ್ಕಳು ಆಟ ಆಡಲು ವಾಲಿಬಾಲ್ ಗ್ರೌಂಡ್, ಕಾಂಪೌಂಡ್ ಗೋಡೆ ಎತ್ತರಕ್ಕೆ ಏರಿಸುವುದು, ಗಾರ್ಡನ್ನಲ್ಲಿ 4 ಮೂಲೆಗಳಲ್ಲಿ ಲೈಟ್ ಅಳವಡಿಸಬೇಕು, ವಾಟರ್ ಫಿಲ್ಟರ್ ಗೆ ವಾಟರ್ ಅಳವಡಿಸಬೇಕು.
ಆದ್ದರಿಂದ ಮಾನ್ಯ ಶಾಸಕರು ಈ ಎಲ್ಲ ಬೇಡಿಕೆಗಳು ಈಡೇರಿಸಿ ಉತ್ತಮ ಗಾರ್ಡನ್ ನವೀಕರಿಸಿಕೊಡಲು ವಿನಂತಿರಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶಾಂತಲಾ ಬಳಮಕರ, ಉಪಾಧ್ಯಕ್ಷೆ ಶೈಲಾ ಕುಂಬಾರ, ಸದಸ್ಯರಾದ ಗೀತಾ ಹಿರೇಮಾಳ, ಭಾಗ್ಯ ಮುರಾಳ, ಭಾರತಿ ಕೌದಿ, ಭಾರತಿ ಕವದಿ, ಭಾರತಿ ಬಗಲಿ, ಸವಿತಾ ಕೊಡುತೆ, ಸುಶೀಲಾ ಪಾಟೀಲ, ಲತಾ ಗಲಗಲಿ, ಜೈಯಶ್ರೀ ಸೊನ್ನ, ಮಹಾದೇವಿ ಕಾಡಿಗೋಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


















