ತಳವಾರ ಹಾಗೂ ಎಸ್ಸಿ/ಎಸ್ಟಿ ನೌಕರ ಮೇಲಿನ ಕಿರುಕುಳ ತಪ್ಪಿಸಲು ಮನವಿ
ವಿಜಯಪುರ : ಸರಿಯಾದ ಪೂರಕ ಸಾಕ್ಷೀಗಳಿಲ್ಲದೆ ದೂರುಗಳನ್ನು ಎಸಿ/ಎಸ್ಟಿ ಸರಕಾರಿ ನೌಕರಸ್ಥರ ಜಾತಿ ನೈಜತೆ ಪರಿಶೀಲನೆ ತಡೆ ಹಿಡಿಯದು ಕಿರುಕುಳ ತಪ್ಪಿಸಬೇಕೆಂದು ವಿಜಯಪುರ ಜಿಲ್ಲಾ ಉಪನಿರ್ದೇಶಕ ಸಮಾಜ ಕಲ್ಯಾಣ ಮಹೇಶ್ ಪೊದ್ದಾರ ಅವರಿಗೆ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಹಾಗೂ ವಿಜಯಪುರ ಜಿಲ್ಲಾ ತಳವಾರ ಸೇವಾ ಸಮತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ವಿಜಯಪುರ ನಗರದಲ್ಲಿ ತಳವಾರ ಸಮಾಜದ ಮುಖಂಡ ಸಾಯಬಣ್ಣ ಬಾಗೇವಾಡಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರಕಾರ ಶೋಷಿತ ವರ್ಗವನ್ನು, ಬುಡಕಟ್ಟು ಜನಾಂಗವನ್ನು ಸಾಮಾಜಿಕವಾಗಿ ಮುಖ್ಯ ಭೂಮಿಕೆ ತರಲು ಅನೇಕ ಕಾರ್ಯಕ್ರಗಳನ್ನು ಜಾರಿಗೆ ತರುತ್ತಿದ್ದು, ಅದಕ್ಕೆ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಅತ್ಯಂತ ಜಾಗೃತಿಯಿಂದ ಜನ ಸಾಮನ್ಯರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮಯ ವಿಚಾರ. ಆದರೆ ದುರಾದೃಷ್ಟವಶಾತ್ ಎಸಿ/ಎಸ್ಟಿ ಸಮುದಾಯದ ಸರಕಾರಿ ನೌಕರಸ್ಥರು ವಿನಃ ಕಾರಣ, ಸಾಕ್ಷೀಗಳಿಲ್ಲದೆ ಸುಳ್ಳು ಆರೋಪಿನಿಂದ ತನಿಖೆ ಎದುರಿಸುತ್ತಾ ಮಾನಸಿಂಕ ಹಿಂಸೆ ಅನುಭವಿಸುತ್ತಿರುವ ಸಂಗತಿ ಕಂಡರೆ, ಎಸಿ/ಎಸ್ಟಿ ಸಮುದಾಯಗಳಿಗೆ ಅತ್ಯಂತ ನೋವು ಹಾಗೂ ದುಖಃಕರ ವಿಚಾರವಾಗಿದೆ.
ಎಸಿ/ಎಸ್ಟಿ ವರ್ಗದವರು ಮೀಸಲಾತಿಯಡಿಯಲ್ಲಿ ಸರಕಾರಿ ನೌಕರಿ ಆಯ್ಕೆಯಾಗಬೇಕಾದರೆ, ಅದಕ್ಕೆ ಅನೇಕ ಪೂರಕವಾಗಿ ದಾಖಲೆಗಳು, ವಿಚಾರಗಳು ಪಡೆದು, ಅದು ಸರಿ/ತಪ್ಪು ಎಂಬ ತನೀಖೆ ಮತ್ತು ಪರಿಶೀಲನೆ ನಡೆಸಿ ನಂತರ ಆ ವ್ಯಕ್ತಿಗಳಿಗೆ ಮೀಸಲಾಡಿಯಲ್ಲಿ ಸರಕಾರಿ ನೌಕರಿಯನ್ನು ಕೊಡುವುದು ಗಮನಿಸಿದ್ದವೆ.
ಅದಲ್ಲದೇ ವ್ಯಕ್ತಿ ಓರ್ವ ಕಂದಾಯ ಇಲಾಖೆಯಿಂದ ಪಡೆದ ಜಾತಿ ಪ್ರಮಾಣ ಪತ್ರ, ಅದು ನೈಜವೂ ಅಥವಾ ಖೊಟ್ಟಿ ಎಂಬ ಪರಿಶೀಲನೆ ನಡೆದ ನಂತರ ಸಮಾಜ ಕಲ್ಯಾಣ ಇಲಾಖೆ ಸಿಂದುತ್ವ ನೀಡುವ ಬಗ್ಗೆ ಮಾನ್ಯ ಮಾಡುತ್ತಿದೆ. ಇದನ್ನು ಹೋರತುಪಡಿಸಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಜಾತಿ ಪರಿಶೀಲನಾ ಸಮೀತಿಯಲ್ಲಿ ಆ ಜಾತಿ ಪ್ರಮಾಣ ಪತ್ರದ ನೈಜತೆ ಕುರಿತು ವಿಚಾರಣೆ ನಡೆದಿರುತ್ತದೆ. ಇಷ್ಟೆಲ್ಲಾ ಮಾನದಂಡದಲ್ಲಿ ಆಯ್ಕೆಯಾದ ಸರಕಾರಿ ನೌಕರಸ್ಥರಿಗೆ ವಿನಃ ಕಾರಣ ತನೀಖೆ ಎದುರಿಸುವುದು ಎಷ್ಟು ಸೂಕ್ತ. ಅವರು ತಮ್ಮ ತನಿಖೆ ಹಿಂಸೆಯಿಂದ ಸರಿಕಾರಿ ಸರಕಾರದ ನೌಕರಿ ಮಾಡದೇ, ಇತ್ತ ಕುಟುಂಬದಲ್ಲಿ ನೆಮ್ಮದಿಯಿಂದ ಜೀವನ ಕಳೆಯದೆ ನಿರಂತರವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕೆಲವು ವ್ಯಕ್ತಿಗಳು ಉದ್ದೇಶ ಪೂರ್ವಕ್ಕಾಗಿ ಎಸಿ/ಎಸ್ಟಿ ಸರಕಾರಿ ನೌಕರರ ಮೇಲೆ ಸುಳ್ಳು ಆರೋಪ ಮಾಡಿ, ಕಿರುಕುಳ ಕೊಡುವುದು, ಮಾನಸಿಂಕ ಹಿಂಸೆ ನೀಡುವುದು, ಹಣಕ್ಕಾಗಿ ಪಿಡಿಸುವುದು, ಜೊತೆಯಲ್ಲಿ ವ್ಯಯಕ್ತಿಕ ಅಥವಾ ಮತ್ತೊಬ್ಬರ ದ್ವೇಷವನ್ನು ಇಟ್ಟುಕೊಂಡು, ಇಲ್ಲ ಯಾರದ್ದೊ ಪ್ರಚೋದನೆಗೆ, ಯಾರದ್ದೋ ಹಣದ ಸಹಾಯ ಪಡೆದು ಇಂತಹ ಕೆಟ್ಟ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಸಾಕ್ಷಿಗಳಿಲ್ಲದೇ ಸುಳ್ಳು ದೂರುಗಳು ಯಾವುದೇ ವ್ಯಕ್ತಿಗಳು ಮೂಕ ಅರ್ಜಿ ಅಥವಾ ಇನ್ನಾವ ಮೂಲದಿಂದ ಅರ್ಜಿ ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ಕಸದ ಡಬ್ಬಿಗೆ ಹಾಕುವುದು ಉತ್ತಮ.. ಸುಳ್ಳು ಆರೋಪಗಳಿಗೆ ಬೆಂಬಲ ನೀಡದೆ ಸೂಕ್ತ ದಾಖಲೆಯೊಂದಿಗೆ ಸಲ್ಲಿಸಿದ ದೂರುಗಳಿಗೆ, ಅರ್ಜಿಗಳಿಗೆ ಪಾರದರ್ಶಕವಾಗಿ ಪರಿಶೀಲನೆ, ವಿಚಾರಣೆ, ತನಿಖೆ ನಡೆಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೋಳ್ಳುತ್ತವೆ. ವಿನಃ ಕಾರಣ ಯಾವುದೆ ವ್ಯಕ್ತಿ ಸುಖಾ ಸುಮ್ಮನೆ ದೂರು ಸಲ್ಲಿಸಿದರೆ ಅದನ್ನು ಬೇರೆ ಬೇರೆ ಇಲಾಖೆ ರವಾನಿಸುವ ಮುನ್ನ ಎಲ್ಲಾ ಆಯಾಮದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರು.

ಇನ್ನೂ ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಮಲ್ಲಪ್ಪ ನಾಟೀಕಾರ, ತಾ.ಪಂ ಮಾಜಿ ಸದಸ್ಯ ಸಿದ್ದಣ್ಣ ತಳವಾರ, ಟಿಎಸ್ಎಸ್ ಜಿಲ್ಲಾಧ್ಯಕ್ಷ ಸೋಮು ಜಮಾದಾರ, ಜಿಲ್ಲಾ ಗೌರವ ಅಧ್ಯಕ್ಷ ಶಿವಶರಣ ನಾಟಿಕಾರ, ಅಖಿಲ ಕರ್ನಾಟಕ ನಾಯಕ ತಳವಾರ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ, ಆಕಾಶ ಬೂದಿಹಾಳ, ಆನಂದ ತಳವಾರ, ಸಂತೋಷ ಸಂಗೋಗಿ, ರವಿ ರಾಯಜಿ, ಹುಲೆಪ್ಪ ತಳವಾರ, ರಾಜು ರೂಡಗಿ, ಅಭಿಷೇಕ ಜಮಾದಾರ, ಯಲ್ಲಪ್ಪ ತಳವಾರ, ಸುದೀಪ್ಪ ಆಲಮೇಲ, ರಮೇಶ್ ದಳವಾಯಿ, ಮಂಜು ದಳವಾಯಿ, ಪ್ರಭು ನಾಟಿಕಾರ, ವಿಕ್ರಮಾದಿತ್ಯ ತೊರವಿ, ವಿಠ್ಠಲ ಧವ್ಯಾಳ, ವಿಠ್ಠಲ ಬಳೂತಿ, ನಿಂಗು ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



















