ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆ
ಬೀದರ್ -ಕಲಬುರಗಿಗೆ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಸೂಚನೆ
Voiceofjanata.in DesK News
ವಿಧಾನಸೌಧದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್ ಹಾಗೂ ಆಕಾಶ ಏರ್ ಸಂಸ್ಥೆಗಳೊಂದಿಗೆ ನಡೆದ ಚರ್ಚೆಯಲ್ಲಿ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು.
2019ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ 742 ಎಕರೆ ವ್ಯಾಪ್ತಿಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಎಐ ನಿರ್ವಹಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಬೆಂಗಳೂರು–ಕಲಬುರಗಿ ಮತ್ತು ಬೆಂಗಳೂರು–ಬೀದರ ವಿಮಾನ ಸೇವೆಗಳ ಕುರಿತು ಖಚಿತ ಪ್ರಸ್ತಾವನೆ ಹಾಗೂ ವೇಳಾಪಟ್ಟಿಯನ್ನು ಮಾರ್ಚ್ 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಇಂದಿನ ಸಭೆಯಲ್ಲಿ ಸಚಿವರುಗಳಾದ ಡಾ. ಶರಣಪ್ರಕಾಶ್ ಆರ್. ಪಾಟೀಲ, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ರಹೀಂ ಖಾನ್ ಹಾಗೂ ಕೆಕೆಆರ್’ಡಿಬಿ ಅಧ್ಯಕ್ಷರು ಮತ್ತು ಶಾಸಕರಾದ ಡಾ. ಅಜಯ್ ಸಿಂಗ್ ಅವರು ಭಾಗವಹಿಸಿ ಕಲಬುರಗಿ ಮತ್ತು ಬೀದರಕ್ಕೆ ನಿಯಮಿತ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಒತ್ತಾಯಿಸಿದರು.
Priyank Kharge Dr. Ajay Dharam Singh Dr.Sharan Prakash Patil
Rahim Khan



















