ಮುದ್ದೇಬಿಹಾಳ: ದ್ವೇಷ, ಭಾರ, ಅಸೂಯೆ, ಇನ್ನೊಬ್ಬರನ್ನು ಹೊಟ್ಟೆ ಉರಿಸುವ ತಂತ್ರಗಳನ್ನು ರೂಪಿಸಿಕೊಂಡು ಇಂದು ಬದುಕನ್ನು ಕಟ್ಟಿಕೊಳ್ಳುತ್ತೀರುವ ನಾವು ದುರಂತ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಮುಕ್ತಾಗುಚ್ಚ ಬ್ರಹನ್ಮಠ, ಕಲ್ಮಠ ಮಾನವಿ ಪಟ್ಟಣದ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ವೀರೇಶ್ವರ ಶರಣರ ಹಾಗೂ ಗುರುದೇವಿ ತಾಯಿಯವರ ೧೦೭ನೇ ಪುಣ್ಯಸ್ಮರಣೆ ಮತ್ತು ವೀರೇಶ್ವರ ಸಹಕಾರಿ ಬ್ಯಾಂಕಿನ ೨೯ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಶರಣ ತತ್ವಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದ ಅವರು ಪ್ರವಚನಗಳ ಮೂಲಕ ಶರಣ ಬದುಕನ್ನು ಕಟ್ಟಿಕೊಳ್ಳಬೇಕು ದಿನಕ್ಕೆ ಒಂದು ಬಾರಿಯಾದರೂ ಲಿಂಗಪೂಜೆ ಮಾಡಿ ಎಂದರು.
ಸಾಲೋಟಗಿಯ ಸಿದ್ದೇಶ್ವರ ಗುರುದೇವಾಶ್ರಮದ ಸಂಗಮೇಶ ಮಹಾಸ್ವಾಮೀಗಳು ಮಾತನಾಡಿ ಈ ನಾಡಿನಲ್ಲಿ ಶ್ರೇಷ್ಟ ಶರಣರ ಪೈಕಿ ನಾಲತವಾಡ ಶರಣ ವೀರೇಶ್ವರ ಶರಣರೂ ಒಬ್ಬರು, ವೀರೇಶ್ವರ ಶರಣ ದಂಪತಿಗಳು ಪುಣ್ಯದ ಹಾದಿ ಕಂಡುಕೊAಡವರು, ಸತ್ಯ ಶುದ್ದ ಕಾಯಕದೊಂದಿಗೆ ಸಂಸಾರ ಮಾಡಿದ ಪುಣ್ಯಾತ್ಮ ಅವರು ಎಂದರು.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಗಳು ಮಾತನಾಡಿ ಜ್ಞಾನದ ಬೆಳಕಿಂಡಿ ಎನ್ನುವ ಸುಂದರ ಪುಸ್ತಕಗಳು ಶರಣ ತತ್ವಗಳನ್ನು ಒಳಗೊಂಡಿದೆ, ಪುಸ್ತಕಗಳು ಜಗತ್ತನ್ನು ಆಳುವ ಶಕ್ತಿ ಹೊಂದಿದೆ, ಈ ನಾಡಿನಲ್ಲಿ ವೀರೇಶ್ವರ ಶರಣರು ಶುದ್ದ ಹಸ್ತದ ಬದುಕು ಕಟ್ಟಿಕೊಂಡ ಪರಿಣಾಮ ಅವರು ಈ ಲೋಕ ಬಿಟ್ಟು ೧೦೭ ವರ್ಷಗಳು ಕಳೆದರೂ ಅವರ ಕಾಯಕ ಸ್ಮರಣೆ ಅಮರ ಎಂದರು.
ಇAಗಳೇಶ್ವರ-ಕೊಡAಗಲ್ನ ವಿರಕ್ತಮಠದ ಡಾ.ಸಿದ್ದಲಿಂಗಯ್ಯ ಮಹಾಸ್ವಾಮೀಗಳು ಆಶೀರ್ವಚನ ನೀಡಿ ಮಾತನಾಡಿ ಈ ಭೂಮಿ ಮೇಲೆ ಬಹಳಷ್ಟು ಸಾಧಕರು ತಮ್ಮ ಸಾಧನೆಯನ್ನು ಜೀವಂತಗೊಳಿಸಿ ಹೋಗಿದ್ದಾರೆ, ಅಂತಹವರ ಪೈಕಿ ನಾಲತವಾಡದ ಶರಣರೂ ಒಬ್ಬರು ಆದರೆ ನಾವು ಇಂದು ದುರಂತದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದ ಅವರು ಶರಣ ವೀರೇಶ್ವರರ ಸಂಕಷ್ಟದ ಜೀವನ ನಮ್ಮ ಬದುಕಿಗೆ ದಾರಿ ದೀಪವಾಗಬೇಕಿದೆ ಎಂದರು.
ವೇದಿಕೆಯಲ್ಲಿ ವೀರೇಶ್ವರ ಪ.ಪೂ.ಕಾಲೇಜಿನ ಪ್ರಾಚರ್ಯರಾದ ಡಾ.ದತ್ತಾತ್ರೇಯ ಮಳಖೇಡ, ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ ಬ್ಯಾಂಕಿನ ಪಕ್ಷಿನೋಟ ಮಂಡಿಸಿದರು, ಮುತ್ತು ಅಂಗಡಿ ಮಾತನಾಡಿದರು.
ವೇದಿಕೆಯಲ್ಲಿ ಪುಟ್ಟ ಬಾಲಕಿ ವರ್ಷಾ ಪಾಟೀಲ ಭರತನಾಟ್ಯ ಗಮನ ಸೆಳೆಯಿತು.ಸ್ಪಾಟ್ಲೈಟ್ ವಿಜಯಪುರದ ವೀರೇಶ ವಾಲಿ, ಹಿರೂ ನಾಯಕ ಹಾಗೂ ವೀರೇಶ ನವಲಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇತ್ತೀಚಿಗೇ ವೀರೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಅಶೋಕ ಹಡಲಗೇರಿ ಹಾಗೂ ನಿವೃತ್ತಿ ಹೊಂದಿದ ಉಪ ಪ್ರಾಚರ್ಯರಾದ ಎಲ್.ಎಸ್.ನಾಯಕ ದಂಪತಿಗಳನ್ನು ಸನ್ಮಾನಿಸಲಾಯಿತು. ಶರಣ ವೀರೇಶ್ವರರ ಕುರಿತು ರಚಿಸಲಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಲೊಟಗೇರಿಯ ಡಾ.ಗುರುಮೂರ್ತಿ ಕಣಕಾಲಮಠ, ಶಂಕರರಾವ್ ದೇಶಮುಖ, ಸಮಾಜ ಸೇವಕರಾದ ಸೋಮನಗೌಡ ಪಾಟೀಲ ನಡಹಳ್ಳಿ, ಬಸರಕೋಡದ ಕೆ.ವೈ.ಬಿರಾದಾರ ಇದ್ದರು. ರಾಜು ಹಾದಿಮನಿ ಹಾಗೂ ಉಪನ್ಯಾಸಕಿ ಅಮ್ಮಾಜಿಗೋಳ ನಿರೂಪಿಸಿದರು.