ಬಾಹ್ಯಾಕಾಶ ವಿಜ್ಞಾನದಲ್ಲಿ ವಿಫುಲ ಅವಕಾಶ
ಇಂಡಿ : ವಿದ್ಯಾರ್ಥಿಗಳು ಶೈಕ್ಷಣ ಕ ಜೀವನದಲ್ಲಿ ಹೆಚ್ಚೆಚ್ಚು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಉಪನ್ಯಾಸಕ ಎಮ್.ಜಿ.ಹಿರೇಮಠ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಅಡಿಯಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವದೇ ಸಾಧನೆಯ ಹಿಂದೆ ಹಲವಾರು ಪ್ರಯತ್ನಗಳು ಇರುತ್ತವೆ. ಎಲ್ಲ ವಿಕ್ರಮಗಳು ನಿರಂತರ ಸಂಶೋಧನೆ ಫಲ ಎಂದರು.
ಬಾಹ್ಯಾಕಾಶ ವಿಜ್ಞಾನದಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಶ್ರದ್ದೆಯಿಂದ ಅಧ್ಯಯನ ಮಾಡಿದರೆ ದೇಶದ ಅಭಿವೃದ್ದಿಯಲ್ಲಿ ಮತ್ತು ಸಾದನೆಯಲ್ಲಿ ಭಾಗಿದಾರರಾಗಬಹುದು ಎಂದು ತಿಳಿಸಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ-೩ ರ ಲ್ಯಾಂಡರ್ ಮತ್ತು ರೋವರ್ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ತಲುಪಿತು. ಇದರೊಂದಿಗೆ, ಭಾರತವು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವಾಯಿತು ಮತ್ತು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಮೊದಲು ಇಳಿಯಿತು. ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ನಿಯೋಜಿಸುವುದರ ಮೂಲಕ ಸಾಫ್ಟ್-ಲ್ಯಾಂಡಿಂಗ್ ಅನ್ನು ಅನುಸರಿಸಲಾಯಿತು. ಈ ಸಾಧನೆಯನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ೨೩ ಅನ್ನು ಭಾರತದಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಘೋಷಿಸಿದರು.” ಎಂದು ಹೇಳಿದರು.
ಪ್ರಾಂಶುಪಾಲ ಡಾ. ಎಸ್.ಬಿ.ಜಾಧವ , ಪ್ರಿಯಂಕಾ ಶಿರಶ್ಯಾಡ, ಅರ್ಪಿತಾ ಬೋಳಸುರ, ಶೃತಿ ಬಿರಾದಾರ, ರೋಹಿಣ ಲಗಳಿ ಮಾತನಾಡಿದರು.
ಡಾ. ಆನಂದ ಸಿ. ನಡವಿನಮನಿ, ಡಾ.ವಿಶ್ವಾಸ ಕೋರವಾರ, ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ. ಶ್ರೀ ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ ಡಾ.ಜಯಪ್ರಸಾದ ಡಿ, ಶ್ರೀ.ಶ್ರೀಕಾಂತ ರಾಠೋಡ, ಆರ್.ಪಿ.ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕರ್ಣಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಕಾರ್ಯಕ್ರಮದಲ್ಲಿ ಹಿರೇಮಠ ಮಾತನಾಡಿದರು.