ಶಿಕ್ಷಕಿ ಮನೆಯಲ್ಲಿ ಬಂಗಾರ ಮತ್ತು ಹಣ ಕಳ್ಳತನ ಎಸಗಿ ಪರಾರಿ..! ಎಲ್ಲಿ ಗೊತ್ತಾ..?
ಇಂಡಿ: ತಾಲೂಕಿನ ಆಳೂರ ಗ್ರಾಮದ ಬಂಗಾರೇವ್ವ ತಂದೆ ಸಿದ್ದಪ್ಪ ಅವಜಿರವರ ಮನೆಯಲ್ಲಿದ ೩.೫೦ ತೊಲಿ ಬಂಗಾರ ಮತ್ತು ೩ಲಕ್ಷ ನಗದು ಕಳ್ಳವಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಶಿಕ್ಷಕಿ ಬಂಗಾರೆವ್ವ ಅವಜಿ ಅವರು ಆಳೂರ ಗ್ರಾಮದಲ್ಲಿದ ಅವರ ಮನೆಯಲ್ಲಿ ಬಂಗಾರ ಮತ್ತು ನಗದು ಇಟ್ಟು ತೊಟಕ್ಕೆ ಹೊಗಿದರಿಂದ ಕಳ್ಳರು ಮನೆಯ ಬಾಗಿಲು ಒಡೆದು ಕಳ್ಳತನ ಎಸಗಿದ್ದಾರೆ. ಈ ಕುರಿತು ಇಂಡಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು. ಗ್ರಾಮಿಣ ಪಿಎಸ್ಐ ಸೋಮೆಶ ಗೆಜ್ಜಿ ಹಾಗೂ ವಿಜಯಪುರದ ಸ್ವಾನದಳ ಹಾಗೂ ಬೆರಳಚ್ಚಗಾರರು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದಾರೆ.
ಇಂಡಿ: ಬಂಗಾರೆವ್ವ ಅವಜಿ ಅವರ ಮನೆಲ್ಲಿದ ಅಲೆಮಾರಿ ಒಡೆದು ಕಳವಾದ ಭಾವಚಿತ್ರ.



















