ಕಣ್ಣುಗಳ ರಕ್ಷಣೆಗೆ ವೈದ್ಯರ ಸಲಹೆ ಅವಶ್ಯಕ
ಇಂಡಿ : ಕಣ್ಣು ಸೂಕ್ಷವಾದ ಅಂಗವಾಗಿದೆ. ಅವುಗಳನ್ನು ಜಾಗೃತವಾಗಿ ಕಾಪಾಡಿ ಕೊಳ್ಳಬೇಕು. ಕಣ್ಣಿನ ಸಮಸ್ಯೆಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಹುಬ್ಬಳ್ಳಿ ಡಾ|| ಎಂ.ಎA.ಜೋಶಿ ಆಸ್ಪತ್ರೆಯ ವೈದ್ಯ ವಾದಿರಾಜ ಕಟ್ಟೆ ಹೇಳಿದರು.
ನಗರದ ಸರಕಾರಿ ಆಸ್ಪತ್ರೆಯಲ್ಲಿ ಲೈನ್ಸ ಸೇವಾ ಸಂಸ್ಥೆ ಇಂಡಿ, ಅಂಧತ್ವ ನಿವಾರಣೆ ಸಂಸ್ಥೆ ವಿಜಯಪುರ ಮತ್ತು ಸಾರ್ವಜನಿಕ ಆಸ್ಪತ್ರೆ ಇಂಡಿ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣು ತಪಾಸಣೆ ಮತ್ತು ಲೆನ್ಸ ಅಳವಡಿಕೆ ಶಿಬಿರದಲ್ಲಿ ಮಾತನಾಡಿದರು.
ಲೈನ್ಸ ಸೇವಾ ಸಂಸ್ಥೆಯ ಅಧ್ಯಕ್ಷ ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ ಮಾತನಾಡಿ ಮನುಷ್ಯನ ದೇಹದಲ್ಲಿ ಕಣ್ಣು ಸಹ ಪ್ರಮುಖ ಅಂಗ, ಅದರ ಸಹಾಯದಿಂದ ನಾವು ಜಗತ್ತನ್ನು ಕಾಣುತ್ತೇವೆ. ಅವುಗಳನ್ನು ಕಾಪಾಡಿಕೊಳ್ಳುವದು ಪ್ರತಿಯೊಬ್ಬರ ಕರ್ತವ್ಯ, ಕಣ್ಣಿನಲ್ಲಿ ಯಾವದೇ ರೀತಿಯ ತೊಂದರೆ ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆಯಬೇಕು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಹುಬ್ಬಳ್ಳಿ ಎಂ.ಎA.ಜೋಶಿ ಆಸ್ಪತ್ರೆ ಡಾ|| ಆದಿ ನಾರಾಯಣ, ಡಾ|| ರಜನ ಇಂಡಿ ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ, ಡಾ|| ಎಂ.ಎಚ್.ಅAಕಲಗಿ, ಬಿ.ಎಂ.ಕವಡಿ, ವಾದಿರಾಜ ಕತ್ತಿ, ಲೈನ್ಸ ಸೇವಾ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಬಿರಾದಾರ ಖಜಾಂಚಿ ಎ.ಬಿ.ಬಿರಾದಾರ ಮತ್ತಿತರಿದ್ದರು.
೩೬೫ ಜನರಿಗೆ ಕಣ್ಣು ತಪಾಸಣೆ ಮತ್ತು ೭೮ ಜನರಿಗೆ ಶಸ್ತç ಚಿಕಿತ್ಸೆ ಫಲಾನುಭವಿ ಎಂದು ಆಯ್ಕೆ ಮಾಡಲಾಯಿತು.
ಇಂಡಿಯ ಸರಕಾರಿ ಆಸ್ಪತ್ರೆಯಲ್ಲಿ ಲೈನ್ಸ ಸೇವಾ ಸಂಸ್ಥೆಯಿAದ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡ ವೈದ್ಯರು ತಂಡದವರು.



















