ನಮ್ಮ ದಶಕದ ಕನಸು ನನಸು ಮಾಡಲು ನಿಂತ – ಸಂಸದ ಜಿಗಜಿಣಗಿ ಜಿಲ್ಲಾ ಉಪಾಧ್ಯಕ್ಷ ಕೆಂಗನಾಳ
ವಿಜಯಪುರ : ಜಿಲ್ಲೆಯ ಜನತೆಯ ದಶಕಗಳ ಕನಸು ಈ ಯೋಜನೆ ಶಿರಾಡೋಣ – ಲಿಂಗಸುರು ರಾಷ್ಟೀಯ ಹೆದ್ದಾರಿ, ಈ ಬಹುದಿನಗಳ ಬೇಡಿಕೆಯನ್ನು ಸಂಸದ ರಮೇಶ ಜಿಗಜಿಣಗಿ ಮುಂದೆ ಇಟ್ಟಾಗ ಅದನ್ನು ಕಾನೂನು ಪ್ರಕ್ರಿಯೆ ಮುಗಿದ ಕೂಡಲೇ ಆದಷ್ಟು ಬೇಗ ಈಡೇರಿಸುವ ಮಾತನ್ನು ಹೇಳಿದ್ದಾರೆ. ಅವರ ಜೊತೆ ನಾವು ಈ ವಿಷಯದಲ್ಲಿ ನಿರಂತರ ಸಂಪರ್ಕದಲ್ಲಿದ್ದು ನಮ್ಮ ಜಿಲ್ಲೆಯ ಈ ನಾಲ್ಕು ಮತಕ್ಷೇತ್ರ ಚಡಚಣ, ಇಂಡಿ, ದೇವರ -ಹಿಪ್ಪರಗಿ , ಮುದ್ದೇಬಿಹಾಳ ಜನತೆಗೆ ಅನುಕೂಲ ಮಾಡುವ ಸದುದ್ದೇಶ ನಮ್ಮದಾಗಿದೆ ಎಂದು ಸಂಸದರು ಪ್ರತಿ ಮಾತಲ್ಲು ಹೇಳಿದ್ದಾರೆ. ಹಾಗೆಯೇ ಪ್ರತಿಯೊಂದು ಮತದ ಋಣ ಬಿಜೆಪಿ ಮೇಲೆ ಇದೆ. ಅದಕ್ಕೆ ಸದಾ ಕಾಲ ಚಿರೃಣಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಭಾವುಕ ಮಾತನ್ನು ಹೇಳಿದ್ದಾರೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಮಯದಲ್ಲಿ ಬಿಜೆಪಿ ಹಿರಿಯ ಮುಖಂಡ ಜಿ ವಾಯ್ ಗೊರನಾಳ, ತಾಲೂಕು ಪಂಚಾಯತ ಸದಸ್ಯ ಪ್ರಕಾಶ ಮುಂಜಿ, ಶಂಕರ ಯಳಕೋಟಿ, ಚಿದಾನಂದ ಕೆಂಗನಾಳ, ಆನಂದ ಜೋರಾಪುರ, ನಿಂಗಪ್ಪ ಬಾಗಲಕೋಟ, ರಾಯಗೊಂಡ ಸಿಂದಗಿ ಇದ್ದರು.