ಕಮಲಾಪುರ ತಾಲೂಕಿನ ನಾಗೂರ್ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಆಚರಿಸಲಾಯಿತು
ಕಮಲಾಪುರ: ವಿಶ್ವಮಾನವ: ಜಾತಿ, ಮತ, ಭೇದಭಾವಗಳನ್ನು ಮೀರಿ “ಮಾನವ”ನಾಗಬೇಕೆಂದು ಕರೆ ನೀಡಿದರು, ಮಂತ್ರಮಾಂಗಲ್ಯ: ಸರಳ ವಿವಾಹ ಪದ್ಧತಿಯನ್ನು ಪರಿಚಯಿಸಿದರು. ಶಿಕ್ಷಣದ ಸುಧಾರಣೆ, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿದರು. ಜಯ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ನೀಡಿ ಕನ್ನಡಾಂಬೆಯ ಐತಿಹಾಸಿಕ ಪರಂಪರೆ, ಹೃದಯ ವೈಶಾಲ್ಯತೆ, ಭ್ರಾತೃತ್ವ, ಸಾಮರಸ್ಯ ಮತ್ತು ಐತಿಹಾಸಿಕಯನ್ನು ಜಗತ್ತಿಗೆ ಪರಿಚಯಿಸಿದವರು ರಾಷ್ಟಕವಿ ಕುವೆಂಪು ಅವರು ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.
ಸೋಮವಾರ ಕಮಲಾಪುರ ತಾಲೂಕಿನ ನಾಗೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ಕಸಾಪ ತಾಲೂಕಾ ಘಟಕ ಹಾಗೂ ನಾಗೂರ ಸರಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಜರುಗಿದ ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನ-ವಿಶ್ವ ಮಾನವ ದಿನಚರಣೆ’ಯನ್ನು ಉದ್ಘಾಟಿಸಿ ಮಾತನಾಡಿ ಮಾನವ ಹುಟ್ಟುತ್ತಾ ವಿಶ್ವನಾನವನಾಗಿ ಹುಟ್ಟುತ್ತಾನೆ. ಬೆಳೆಯುತ್ತಲೇ ಆತ ಸ್ವಾರ್ಥ, ಸ್ವಜನ ಪಕ್ಷಪಾತ,ಜಾತಿ, ಧರ್ಮಗಳು, ಮೌಢ್ಯತೆಯಂತಹ ಸಂಕೋಲೆಗಳಲ್ಲಿ ಸಿಲುಕಿ ಅಲ್ಪ ಮಾನವನಾಗುತ್ತಾನೆ. ಆತನಿಗೆ ಶಿಕ್ಷಣ, ಮೌಲ್ಯಗಳನ್ನು ನೀಡಿ ಪುನಃ ವಿಶ್ವಮಾನವನನ್ನಾಗಿ ಮಾಡುವ ಕೆಲಸವಾಗಬೇಕು, ಮನುಷ್ಯರೆಲ್ಲರೂ ಸರ್ವರು ಸಮಾನರು ಎಂಬ ಭಾತೃತ್ವದ ಚಿಂತನೆ ಸಾರಿದ ಮೇರು ದಾರ್ಶನಿಕ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅನನ್ಯವಾಗಿದೆ ,ಕನ್ನಡ ಸಾಹಿತ್ಯ ಮೊಟ್ಟಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ಶ್ರೇಷ್ಠ ಕವಿ ಕಾದಂಬರಿ ಕಾರ ನಾಟಕಕಾರ ಹಾಗೂ ಲೇಖಕರು ಎಂದರೆ ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರು, ಸಮಾಜದಲ್ಲಿನ ಜಾತೀಯತೆ, ಅಸ್ಪ್ರಶ್ಯತೆ , ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳನ್ನು ಕಿತ್ತೊಗೆದು ಸರಿ ಸಮಾನವಾದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನರಲ್ಲಿ ಕುವೆಂಪು ಅವರು ಒಬ್ಬರು
ಎಂದರು.
ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಕುವೆಂಪು ಅವರು ಪ್ರತಿಯೊಬ್ಬರಲ್ಲಿಯೂ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅರಿವು ಮೂಡುವಂತೆ ತಮ್ಮದೇ ಆದ ಅನೇಕ ಮೌಲ್ಯಯುತ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಕನ್ನಡಿಗರ ಸ್ವಾಭಿಮಾನವನ್ನು ಬಡೆದೆಬ್ಬಿಸಿದ ಮಹಾಕವಿಯಾಗಿದ್ದಾರೆ. ಇವರು ಮಾನವೀಯ ಮೌಲ್ಯಗಳ ಮಹಾನ ಚೇತನವಾಗಿದ್ದಾರೆ. ಮಹಾಕಾವ್ಯ, ನಾಟಕ, ಬಿಡಿ ಕವನ ಸಂಕಲನ, ಕಥಾ ಸಂಕಲನ, ಆತ್ಮಕಥೆ, ವಿಮರ್ಶೆ, ಜೀವನಚರಿತ್ರೆ, ವೈಚಾರಿಕ ಲೇಖನ ಹೀಗೆ ಬಹುಮುಖ ಸಾಹಿತ್ಯ ಕೃಷಿ ಮಾಡಿದ್ದಾರೆ. ಸರ್ಕಾರವು 2015ರಲ್ಲಿ ಕುವೆಂಪು ಅವರ ಜನ್ಮದಿನವನ್ನು ‘ವಿಶ್ವ ಮಾನವ ದಿನ’ವನ್ನಾಗಿ ಆಚರಿಸುವ ಮೂಲಕ ಅವರ ಶ್ರೇಷ್ಟ ಚಿಂತನೆಗೆ ಗೌರವ ನೀಡಿರುವ ಕಾರ್ಯ ಅಮೋಘವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಜಗನಾಥ ಎಂ.ಸಾತಲಗಾಂವ, ಕನ್ನಡ ಭಾಷಾ ಶಿಕ್ಷಕಿ ಜಲಜಾಕ್ಷಿ ಹಿರೇಮಠ ಮಾತನಾಡಿದರು.
ನಾಗೂರ ಗ್ರಾಪಂ ಅಧ್ಯಕ್ಷ ಕಿರಣಕುಮಾರ ಹೊಸಮನಿ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಜಯಶ್ರೀ ಕೆ., ಶಿಕ್ಷಕ ಮೌನೇಶ್ವರ ರೇಶ್ಮಿ, ನಿಂಗಪ್ಪ ನಾಗೂರೆ, ಪ್ರಾಥಮಿಕ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕ ವಿಶ್ವನಾಥ ರಾಠೋಡ, ಪ್ರಾಥಮಿಕ ಉದು೯ ಶಾಲೆಯ ಮುಖ್ಯ ಗುರು ರಾಜೇಶ್ವರಿ ಬಿರಾದರ, ಅನ್ನಪೂರ್ಣ ಉಳಾಗಡ್ಡಿ, ಶಿಕ್ಷಕಿ ಕಾವೇರಿ ಅಂಬಲಗಿ, ಶಿಕ್ಷಕಿ ಹೀನಾ ಕೌಸರ್, ಸಿದ್ದಲಿಂಗ ಪಡಶೆಟ್ಟಿ , ಸಂಗೀತಾ ಗೌಳಿ ಇತರರು ಇದ್ದರು.
ದೈಹಿಕ ಶಿಕ್ಷಕ ನಿಂಗಪ್ಪ ನಾಗೂರೆ ನಿರೂಪಿಸಿದರು, ಶಿಕ್ಷಕ ಮೌನೇಶ್ವರ ರೆಶ್ಮಿ ವಂದಿಸಿದರು.



















