ಅ ೩೦. ಮಾಲಗಂಭ ಲೋಕಾರ್ಪಣೆ
ಇಂಡಿ :ತಾಲೂಕಿನ ಕೋಟ್ನಾಳ ಗ್ರಾಮದ ಶ್ರೀಯಲ್ಲದೇವಿ ಮಾಲಗಂಭ ಉದ್ಘಾಟನೆ ಹಾಗೂ ಧರ್ಮಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಗಸ್ಟ್ ೩೦ ರಂದು ಶುಕ್ರವಾರ ಬೆಳಿಗೆ ೮- ಗಂಟೆ ಬೆಳಿಗ್ಗೆ ದೇವತೆಗಳಿಗೆ ಗಂಗೆ ಸೀತಾಳ ಹಾಗೂ ಮುತೈದಿಯರಿಂದ ಕುಂಬಮೆರವಣಗೆ . ಸಾಲೋಟಗಿ ಗ್ರಾಮದ ಶ್ರೀಶಿವಯೋಗೇಶ್ವರ ಚಿಟ್ಟಲಿಗೆ ತಂಡದಿAದ ವೈವಿಧ್ಯಮಯ ಕುಣ ತ, ದೇವಿಯ ಮೆರವಣಗೆಯಲ್ಲಿ ಪ್ರಸಿದ್ದ ಹಲಗೆ ಮೇಳದೊಂದಿಗೆ ಜೋಗತಿಯರಿಂದ ಕುಣ ತ ಹಾಗೂ ವಿವಿಧ ವಾದ್ಯವೈಭೋಗಗಳ ಕಲಾತಂಡದ ಪ್ರದರ್ಶನ. ೯-೦೦ ಮುಂಜಾನೆ ಗಂಟೆಗೆ ನೂತನ ಮಾಲಂಗಂಭಕ್ಕೆ ವಿಶೇಷ ಅಭಿಷೇಕ ಮಾಡಲಾಗುವುದು.
ಅದೇ ದಿನ ಮಧ್ಯಾಹ್ನ ೩-೩೦ ಗಂಟೆಗೆ ಬೇರೆ ಸ್ಥಳಗಳಿಂದ ಬಂದ ಭಕ್ತಾದಿಗಳಿಗೆ ಮಹಾಪ್ರಸಾದ, ರಾತ್ರಿ೧೦ ಗಂಟೆಗೆ ಶ್ರೀಯಲ್ಲಮ್ಮ ಚೌಡಕಿ ಪದಗಳು ಗಂಗನಹಳ್ಳಿ ಗ್ರಾಮ, ಕೊಟ್ನಾಳ ಗ್ರಾಮ , ತಿಡಗುಂದಿ ಗ್ರಾಮ, ತೊರವಿ ಗ್ರಾಮ, ಕನ್ನೂರ ಗ್ರಾಮದವರಿಂದ ಚೌಡಕಿಪದಗಳ ಕಾರ್ಯಕ್ರಮ.
ದಿನಾಂಕ ೩೧ ರಂದು ಶನಿವಾರ ಮುಂಜಾನೆ ೦೯ ಗಂಟೆಗೆ ಧರ್ಮಸಭೆ ಹಾಗೂ ಶ್ರೀಯಲ್ಲದೇವಿಯ ನೂತನ ಮಾಲಗಂಭಕ್ಕೆ ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಇವರಿಂದ ಉದ್ಘಾಟನಾ ಸಮಾರಂಭ.ದಿವ್ಯಸಾನಿಧ್ಯ ವೇದಮೋರ್ತಿ ರಾಚಯ್ಯಾ ಹಿರೇಮಠ, ಅದ್ಯಕ್ಷತೆ ಬಸವರಾಜ ದೇಶಮುಖ, ಅತಿಗಳಾಗಿ ರಾಜಶೇಖರ ಎಸ್ ಕುರಿಯವರ ಸದಸ್ಯರು ಮಹಾನಗರ ಪಾಲಿಕೆ ವಿಜಯಪೂರ, ಶರಣಬಸಪ್ಪಾ ಕಾಂಬಳೆ, ಮಹೇಶ ಕಾಂಬಳೆ ಉಪನ್ಯಾಸಕರು ಚಾಣಕ್ಯ ಕರಿಯರ್ ಅಕ್ಯಾಡಮಿ ವಿಜಯಪೂರ ಕಾರ್ಯಕ್ರಮದಲ್ಲಿ ಆಗಮಿಸಲ್ಲಿದ್ದಾರೆ ಆದ್ದರಿಂದ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆರ್ಶೀವಾದ ಪಡೆಯಬೇಕು ಎಂದು ಕೋಟ್ನಾಳ ಗ್ರಾಮಸ್ಥರು ಹಾಗೂ ಜಾತ್ರಾಕಮೀಟಿ ಸದಸ್ಯರು ಪ್ರಕಟಣೆಗೆ ತಿಳಿಸಿದ್ದಾರೆ.
ಇಂಡಿ ತಾಲೂಕಿನ ಕೋಟ್ನಾಳ ಗ್ರಾಮದ ಶ್ರೀಯಲ್ಲದೇವಿಯ ನೂತನ ಮಾಲಗಂಭ ಚಿತ್ರ.