• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

    ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

    ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

    ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

    ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

    ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

    79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

    79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

    ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

    ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

      ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

      79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

      79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

      ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

      ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

      ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

      ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

      ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

      ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

      ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

      ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

      “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

      “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಅಕ್ರಮ ಮಣ್ಣು ಸಾಗಾಟ ತಡೆಯುವಲ್ಲಿ ಅಧಿಕಾರಿಗಳು ವಿಫಲ..! ಮೂರು ಮಂಗಗಳ ರೂಪದಲ್ಲಿ ವಿನೂತನ ಪ್ರತಿಭಟನೆ

      Voiceofjanata.in

      March 20, 2025
      0
      ಅಕ್ರಮ ಮಣ್ಣು ಸಾಗಾಟ ತಡೆಯುವಲ್ಲಿ ಅಧಿಕಾರಿಗಳು ವಿಫಲ..! ಮೂರು ಮಂಗಗಳ ರೂಪದಲ್ಲಿ ವಿನೂತನ ಪ್ರತಿಭಟನೆ
      0
      SHARES
      48
      VIEWS
      Share on FacebookShare on TwitterShare on whatsappShare on telegramShare on Mail

      ಅಕ್ರಮ ಮಣ್ಣು ಸಾಗಾಟ ತಡೆಯುವಲ್ಲಿ ಅಧಿಕಾರಿಗಳು ವಿಫಲ..! ಮೂರು ಮಂಗಗಳ ರೂಪದಲ್ಲಿ ವಿನೂತನ ಪ್ರತಿಭಟನೆ

       

      ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ:ಕೃಷ್ಣಾ ನದಿ ದಂಡೆಯಲ್ಲಿ ಫಲವತ್ತಾದ ಕಪ್ಪು ಎರೆ, ಮೆಕ್ಕಲು ಮಣ್ಣಿನ ಅಕ್ರಮ ಸಾಗಾಟ ತಡೆಯುವಲ್ಲಿ ವಿಫಲರಾಗಿರುವ ಅಧಿಕಾರಿಗಳ ನಡವಳಿಕೆ ಖಂಡಿಸಿ ಮೂರು ಮಂಗಗಳ ಫ್ಲೆಕ್ಸ್ನೊಂದಿಗೆ ಕಣ್ಣು, ಬಾಯಿ, ಕಿವಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಯುವಜನ ಸೇನೆ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಇಲ್ಲಿನ ತಾಲೂಕು ಆಡಳಿತ ಸೌಧ ಆವರಣದಲ್ಲಿ ವಿನೂತನ ಪ್ರತಿಭಟನೆ ನಡೆಸಿ ತಹಶೀಲ್ದಾರ್, ಪೊಲೀಸ್, ಕೆಬಿಜೆಎನ್ನೆಲ್ ಅಧಿಕಾರಿಗಳ ನಿರ್ಲಕ್ಷ್ಯಯಕ್ ವಿಡಂಬನಾ ಶೈಲಿಯಲ್ಲಿ ಚಾಟಿ ಬೀಸಿದರು.
      ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ, ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ ಅವರು ತಂಗಡಗಿಯಿಂದ ನಾರಾಯಣಪುರ ಡ್ಯಾಂ ಹಿಂಭಾಗದ ಅಯ್ಯನಗುಡಿ ಗ್ರಾಮದವರೆಗೂ ಕೃಷ್ಣಾ ನದಿ ದಂಡೆಯಲ್ಲಿರುವ ಫಲವತ್ತಾದ ಕಪ್ಪು ಮಣ್ಣನ್ನು ರೈತರ ಹೆಸರಿನಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ರಾಜಸ್ವ ನಷ್ಟವಾಗುತ್ತಿರುವುದು ಮಾತ್ರವಲ್ಲದೆ ನದಿ ದಂಡೆಯಲ್ಲಿ ಆಳವಾದ ತಗ್ಗು ಸೃಷ್ಟಿಯಾಗಿ ಭವಿಷ್ಯದಲ್ಲಿ ಜನ, ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಅಕ್ರಮ ತಡೆಯುವಂತೆ ಮನವಿ ಸಲ್ಲಿಸಿದರೂ, ಲೋಕಾಯುಕ್ತರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದರೂ ತಹಸೀಲ್ದಾರ್, ಪೊಲೀಸ್, ಕೆಬಿಜೆಎನ್ನೆಲ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಕಾನೂನು ಹೋರಾಟದ ಜೊತೆಗೆ ಸರ್ಕಾರದ ಮಟ್ಟದಲ್ಲೂ ಮನವಿ ಸಲ್ಲಿಸಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
      ಯುವಜನ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಅವರು ಮಾತನಾಡಿ, ತಿಂಗಳ ಹಿಂದಿನಿಂದಲೂ ಈ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದರೂ ಅನುಮತಿ ಇಲ್ಲದೆ ಪಲವತ್ತಾದ ಮಣ್ಣನ್ನು ಟ್ರಿಪ್‌ಗೆ ೫೦೦೦ ರೂನಂತೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಗಮನ ಸೆಳೆದರೆ ತಹಸೀಲ್ದಾರ್ ಅವರು ಇದು ತನಗೆ ಸಂಬಂಧಿಸಿದ್ದಲ್ಲ ಕೆಬಿಜೆಎನ್ನೆಲ್‌ಗೆ ಸಂಬಂಧಿಸಿದ್ದು ಎನ್ನುತ್ತಾರೆ. ಪೊಲೀಸರು ತಹಸೀಲ್ದಾರ್ ಕಂಪ್ಲೆಂಟ್ ಕೊಟ್ಟರೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳುತ್ತಾರೆ. ಕೆಬಿಜೆಎನ್ನೆಲ್‌ನವರು ತಮಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳ ಕೈ ಕೆಲಸ ಮಾಡುತ್ತಿದೆ. ಅಕ್ರಮ ತಡೆಗಟ್ಟಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಕೈಚಲ್ಲಿ ಸುಮ್ಮನಾದರೆ ಅಕ್ರಮ ನಡೆಸುವವರಿಗೆ ಸಪೋರ್ಟ ಮಾಡಿದಂತಾಗೊಲ್ಲವೇ. ಸ್ಥಳಕ್ಕೆ ಭೇಟಿ ನೀಡಿ ಎಂದರೆ ತಹಸೀಲ್ದಾರ್, ಪಿಎಸೈ ಅವರು ಸ್ಪಂಧಿಸಿಲ್ಲ. ೨೦ ದಿನಗಳಾದರೂ ಹೋರಾಟಗಾರರಿಗೆ ಯಾವ ರೀತಿ ಸ್ಪಂಧಿಸಬೇಕೆನ್ನುವ ಮನೋಭಾವ ಇಲ್ಲದಿರುವುದು ಸಹಿಸಲಸಾಧ್ಯ. ರೈತಸಂಘದವರು ಯಾರದೋ ಮಾತು ಕೇಳಿ ಸೋಮವಾರ ಹೋರಾಟ ನಡೆಸಿದ್ದು ಅವರ ದಾರಿ ತಪ್ಪಿಸಿದಂತಾಗಿದೆ ಎಂದು ಕಿಡಿಕಾರಿದರು.
      ಶಿವು ಕನ್ನೊಳ್ಳಿ ಅವರು ಮಾತನಾಡಿ ಮಣ್ಣುಮಾಫಿಯಾ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ.
      ಸ್ವಯಂಘೋಷಿತ ಚಿಂತಕರು, ಕಲಾವಿದರು ಹೋರಾಟ ನಡೆಸಿ ಫಲವತ್ತಾದ ಕೃಷಿಗೆ ಉಪಯುಕ್ತ ಮಣ್ಣು ಎನ್ನುತ್ತಿದ್ದಾರೆ. ಊರ ಮುಂಭಾಗದಲ್ಲಿ ಕೊರಿ, ತೆಗ್ಗು ಮಾಡುವುದರಿಂದ ಸ್ಥಳೀಯರಿಗೆ, ದನಕರುಗಳಿಗೆ ತೊಂದರೆ ಆಗುತ್ತದೆ. ಮೊಸಳೆಗಳು ಬಂದು ವಾಸಸ್ಥಲವಾಗಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೊಳಿದಂಡಿ ರೈತರು ಜಮೀನು ಕಳೆದುಕೊಂಡು ತೊಂದರೆಗೀಡಾಗಿದ್ದು ಈ ರೀತಿ ಮಣ್ಣು ಸಾಗಿಸಿದರೆ ಅಂಥ ರೈತರ ಬಾಳು ಏನಾಗಬೇಕು. ಎಲ್ಲೆಂದರಲ್ಲಿ ತಗ್ಗು ತೋಡಿ ಮಣ್ಣು ಸಾಗಿಸಿ ಜೀವನ ದುರಂತವಾಗಿಸಿದ್ದಾರೆ. ಗ್ರಾಮಗಳ ಪರಿಸ್ಥಿತಿ ಅರಿವಿಲ್ಲದೆ ರೈತರ ಹೆಸರಿನಲ್ಲಿ ಹೋರಾಟ ಮಾಡಿದ್ದು ಖಂಡನೀಯ. ರೈತರಿಗೆ ನಿಜವಾಗಿಯೂ ಮಣ್ಣು ಬೇಕಾಗಿದ್ದರೆ ನದಿಯಲ್ಲಿರುವ ಮಣ್ಣನ್ನು ಬಳಸಿ. ಇದನ್ನು ಮಾಡದೆ ನದಿ ದಂಡೆಯಲ್ಲಿರುವ ಮಣ್ಣು ಸಾಗಿಸುವುದು, ಮಣ್ಣಿನ ಹೆಸರಿನಲ್ಲಿ ಗರಸು, ಮರಳು ಅಕ್ರಮವಾಗಿ ಸಾಗಿಸುವುದು ಸಲ್ಲದು. ತಹಸೀಲ್ದಾರ್ ಅವರು ಇಂಥ ಅನಾಚಾರಗಳನ್ನು ಕೂಡಲೇ ಕ್ರಿಯಾಶೀಲರಾಗಿ ಪೊಲೀಸರಿಗೆ ತಿಳಿಸಿ ತಡೆಗಟ್ಟಬೇಕು. ಇದನ್ನು ಬಿಟ್ಟು ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಸ್ಥಳ ಪರಿಶೀಲಿಸಿ ವಾಸ್ತವ ತಿಳಿದುಕೊಳ್ಳಬೇಕು ಎಂದು ಆಗ್ರಹಿಸಿದರು.
      ಇದೇ ವೇಳೆ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ಎಂ.ಎ.ಬಾಗೇವಾಡಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಅವರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಪತ್ರ ಬರೆದು ನಿಯಮಾನುಸಾರ ಕ್ರಮ ಜರುಗಿಸುವಂತೆ ಕೋರಿ ಮಾ.೧೭ರಂದು ಬರೆದ ಪತ್ರವನ್ನು ಹೋರಾಟಗಾರರಿಗೆ ಸಲ್ಲಿಸಿದರು.
      ಪ್ರಮುಖರಾದ ಪ್ರಕಾಶ ಚಲವಾದಿ ಸರೂರ, ಚಂದ್ರು ಹಡಪದ, ಅಜಯಕುಮಾರ ಕೋಟೆಖಾನ, ಕಾಶಿಮಸಾಬ ಗಂಗೂರ, ಬಾಬಾ ತಗ್ಗಿನಮನಿ, ಮಾಂತೇಶ ಚಲವಾದಿ, ಗಂಗು ಗಂಗನಗೌಡರ, ರಾಜು ಮಸಿಬಿನಾಳ, ಶಿವು ವನಕಿಹಾಳ, ಅಶೋಕ ನಿಡಗುಂದಿ, ಸಂಗಪ್ಪ ಪೊಲೀಸ್‌ಪಾಟೀಲ, ಅಯ್ಯಪ್ಪ ತಂಗಡಗಿ, ಶಿವು ಮುಳವಾಡ,ಹುಲಗಪ್ಪ ಮಾದರ, ಸೇರಿದಂತೆ ಪಾಲ್ಗೊಂಡಿದ್ದರು.
      ಮುದ್ದೇಬಿಹಾಳ: ಹೋರಾಟಗಾರರು ಮೂರು ಮಂಗಗಳ ಫ್ಲೆಕ್ಸ್ನೊಂದಿಗೆ ಕಿವಿ, ಬಾಯಿ, ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ವಿನೂತನವಾಗಿ ಪ್ರತಿಭಟಿಸಿದರು. ಸಂಗಯ್ಯ ಸಾರಂಗಮಠ, ಶಿವಾನಂದ ವಾಲಿ ಇನ್ನಿತರರು ಇದ್ದಾರೆ.
       ಮುದ್ದೇಬಿಹಾಳ: ಅಕ್ರಮವಾಗಿ ಕಪ್ಪು ಎರೆ ಮಣ್ಣು ಸಾಗಾಟ ತಡೆಯುವಲ್ಲಿ ವಿಫರಾಗಿರುವ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹದಲ್ಲಿ ಸಂಗಯ್ಯ ಸಾರಂಗಮಠ ಮಾತನಾಡಿದರು. ಶಿವಾನಂದ ವಾಲಿ, ಪ್ರಕಾಶ ಚಲವಾದಿ, ಆನಂದ ಮುದೂರ ಇನ್ನಿತರರು ಇದ್ದಾರೆ.
      Tags: #indi / vijayapur#Muddebihall/vijayapir#Officers fail to prevent illegal soil trafficking An innovative protest in the form of three monkeys#State News#Today News#Voiceofjanata.in#ಅಕ್ರಮ ಮಣ್ಣು ಸಾಗಾಟ ತಡೆಯುವಲ್ಲಿ ಅಧಿಕಾರಿಗಳು ವಿಫಲ..! ಮೂರು ಮಂಗಗಳ ರೂಪದಲ್ಲಿ ವಿನೂತನ ಪ್ರತಿಭಟನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      August 1, 2025
      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      August 1, 2025
      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      August 1, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.