ಮುದ್ದೇಬಿಹಾಳ:ನಾವು ಶಿಕ್ಷಣ, ರಾಜಕೀಯ ಶಕ್ತಿ ಪಡೆಯಬೇಕಾದರೆ, ದಾರ್ಮಿಕ ಸ್ವಾವಲಂಬಿಗಳಾಗಬೇಕಾದರೆ, ಅಂಬಿಗರ ಚೌಡಯ್ಯನವರ ಪಾದವನ್ನು ಗಟ್ಟಿಯಾಗಿ ಹಿಡಿಬೇಕು. ಅಂಬಿಗರ ಚೌಡಯ್ಯನನ್ನು ನಂಬಿದವರಿಗೆ ಕೇಡಿಲ್ಲ ಎಂದು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರ ಹೇಳಿದರು.
ಅವರು ಮುದ್ದೇಬಿಹಾಳ ಪಟ್ಟಣದಲ್ಲಿ ಹಮ್ಮಿಕೊಂಡ ನಿಜ ಶರಣ ಅಂಬಿಗರ ಚೌಡಯ್ಯ ಮೂರ್ತಿಯ ಲೋಕಾರ್ಪಣೆ ಮತ್ತು ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾಜದ ಬೆಳವಣಿಗೆಗೆ ಮತ್ತು ಇಂತಹ ಕಾರ್ಯಕ್ರಮಕ್ಕೆ ಸಂಘಟನೆ ಬಹಳ ಮುಖ್ಯ ನೀವು ಈ ರೀತಿ ಕಾರ್ಯಕ್ರಮ ನೋಡಿ ನನಗ ಸಂತಸ ತಂದಿದೆ. ಅದರೊಂದಿಗೆ ಇಲ್ಲಿನ ಜನ ಚೌಡಯ್ಯನವರ ಪೀಠಕ್ಕೆ ಬಂದು ಅವರ ಒಂದು ಆಶಿರ್ವಾದವನ್ನು ಪಡೆಯುವ ಜೊತೆಗೆ ಶಿಕ್ಷಣವಂತರಾಗಿ, ಯಾವುದೇ ಮೂಢನಂಬಿಕೆಗೆ ದಾಸರಾಗಬೇಡಿ,ಕಾಯಕ ಮಾಡಿ ನಿಮ್ಮ ಶ್ರಮದ ಫಲ ಪಡೆಯಿರಿ ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ:
ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರತಿಯೊಂದು ರಂಗದಲ್ಲಿ ಹೋರಾಟ ಮಾಡಿ ಇಲ್ಲಿಯವರೆಗೆ ಬಂದು ದಣಿದು ನಿಂತಿದ್ದೇವೆ.ನಾನು ೭೨ ಇಸವಿಯಿಂದ ಸಮಾಜದ ಸಂಘಟನೆ ಮಾಡಲು ಬರುತ್ತಿದ್ದೆ,ಆದರೆ ಅಂದು ಇಲ್ಲಿ ನಮ್ಮ ಜನ ಇದೆ ಎಂದು ಕೇಳಿದರೆ ಧಣಿಗಳಿಗೆ ಬಹಳ ಜನ ಅಂಜುತ್ತಾರೆ ಎಂಬುದು ಕೇಳಿಬರ್ತಿತ್ತು.ಆದರೆ ಅಂಜಿ ನೀವು ಮನೆಯಲ್ಲಿ ಕುಳಿತರೆ ಸಮಾಜದ ಸಂಘಟನೆ ಹೇಗೆ ಕಟ್ಟುತ್ತಿರಿ ಎನ್ನುವ ವಿಚಾರ ಯಾವಾಗ ಬರುತ್ತದೆ ಎಂದರೆ ಇಂತಹ ಸಭೆ ಸಮಾರಂಭದಲ್ಲಿ ಭಾಗವಹಿಸಿದಾಗ ಬರುತ್ತದೆ.ಕಾರಣ ಬಾಂಧವರು ಇಂತಹ ಸಮಾರಂಭ ಮಾಡುವ ಮೂಲಕ ಸಂಘಟಿತರಾಗಬೇಕು,ಜಾಗೃತರಾಗಬೇಕು ಎಂದರು.
ಡಾ.ಸಾಬಣ್ಣ ತಳವಾರ ವಿಧಾನ ಪರಿಷತ್ ಸದಸ್ಯರು ಮಾತನಾಡಿ ಗಂಗೆಯ ಮತ್ತು ಭೀಷ್ಮನ ಮಕ್ಕಳು ನಾವು ೫ ಸಾವಿರ ವರ್ಷದ ಹಿಂದೆ ಜಗತ್ತಿಗೆ ಬೆಳಕನ್ನು ಕೊಟ್ಟಂತ ವೇದವ್ಯಾಸರ ವಂಶಸ್ಥರು ನಾವು.ಅಂತಹ ಒಂದು ಶ್ರೇಷ್ಠ ಕುಲ ನಮ್ಮದು,ನಮ್ಮ ಸಮಾಜವು ಪರಿಶಿಷ್ಟ ಪಂಗಡಕೆ,ಬೇಡ ಜಾತಿಯ ಜನರನ್ನು ಸೇರಿಸುವಾಗಲೇ ನಮ್ಮ ಸಮಾಜದ ವರದಿಯು ಕೂಡ ಹೋಗಿತ್ತು,ಆದರೆ ಕಾರಣಾಂತರದಿಂದ ಅಂದು ಸಿಪಾರಸ್ಸು ಆಗದೆ ಉಳಿದಿದೆ,ಕಾರಣ ರಾಜಕೀಯ ಆರ್ಥಿಕ ಬೆಂಬಲ ಮತ್ತು ಸಂಘಟನೆ ಆಗದೆ ಇರುವುದು. ಇನ್ನ ಮೇಲಾದರು ಸಮಾಜದ ಜನ ಎಚ್ಚೇತ್ತು ಹೋರಾಟಕ್ಕೆ ಬೆಂಬಲ ನೀಡಿ ಉಳಿದ ಪರ್ಯಾಯ ಉಪ ಜಾತಿಗಳಿಗು ಪರಿಶಿಷ್ಟ ಜಾತಿ ಪ್ರತಿಗಳನ್ನು ಪಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಶಾಂತ ಗಂಗಾಧರ ಸ್ವಾಮಿಜಿ ಸಿಂದಗಿ, ಬಸವಲಿಂಗ ಮಹಾಸ್ವಾಮಿಗಳು ಸಮಾಜ ಸಂಘಟನೆ ಧಾರ್ಮಿಕ ಆಚಾರ ವಿಚಾರಗಳ ಕುರಿತು ಆಶಿರ್ವಚಣ ನೀಡಿದರು.
ಶಿವಕುಮಾರ ನಾಟಿಕಾರ ಅಪ್ಜಲಪುರ,ಎಲ್.ಸಿ.ಕೋಲಕಾರ ತಾಲೂಕು ಅಧ್ಯಕ್ಷರು, ವೆಂಕಟೇಶ ಅಂಬಿಗೇರ ಪ್ರಾಸ್ತಾವಿಕ,ಉಮೇಶ.ಕೆ.ಮುದ್ನಾಳ,ಸಂಗಪ್ಪ ಪ್ಯಾಟಿ ಮಾತನಾಡಿದರು,
ಅದಕ್ಕೂ ಮೊದಲು ತಂಗಡಗಿ ರಸ್ತೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಲೋಕಾರ್ಪಣೆ ಗೊಳಿಸಿದರು,ಪೂಜ್ಯ ಶಾಂತಭೀಷ್ಮ ಚೌಡಯ್ಯ, ಬಸವಲಿಂಗ ಮಹಾಸ್ವಾಮಿಗಳು, ಮಾಜಿ ಸಚಿವ ಪ್ರಮೋದ ಮಧ್ವರಾಜ ಹಾಗೂ ಸಮಾಜ ಬಾಂಧವರ ನೇತೃತ್ವದಲ್ಲಿ ಜರುಗಿತು, ನಂತರ ೫೦೦ ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭ ಹೊತ್ತು ಬಸವೇಶ್ವರ ವೃತ್ತದ ಮೂಲಕ ಸಕಲ ವಾಧ್ಯಮೇಳದ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಜನರೊಂದಿಗೆ ಮೆರವಣಿಗೆ ಹೊರಟಿತು.ತೆಪ್ಪದಲ್ಲಿ ಚೌಡಯ್ಯನವರ ವೇಷ ಭೂಷಣ ಧರಿಸಿದ್ದು ಆಕರ್ಷಕವಾಗಿತ್ತು.
ಈ ವೇಳೆ ವೇದಿಕೆಯ ಮೇಲೆ ಶೋಭಾತಾಯಿಯವರು,ಸಾವಿತ್ರಿ ಶರಣೆಯರು ದೇವೂರ,ಶಿವಶರಣಮ್ಮನ್ನವರು ರೋಡಗಿ, ಸೋಮನಗೌಡ ಪಾಟೀಲ ನಡಹಳ್ಳಿ,ಮಡಿವಾಳಪ್ಪ ಬಿದರಕೋಟಿ, ಬಸವರಾಜ ಕಟ್ಟಿಮನಿ,ಡಿ.ಎಲ್.ಶಾಸ್ತ್ರಿ,ಸಂಗಣ್ಣ ಬೋಯರ,ರಾಮಣ್ಣ ಕೇಸಾಪುರ,ಸಿದ್ದಣ್ಣ ಐರೋಡಗಿ, ಸೇರಿದಂತೆ ಮತ್ತು ಈ ವೇಳೆ ಸಮಾಜದ ಸುನೀಲ ಉಕ್ಕಲಿ, ಸಂತೋಷ ಮನಗೂಳಿ, ಗಣೇಶ ಉಕ್ಕಲಿ,ಚಂದ್ರಕಾಂತ ಮನಗೂಳಿ, ರಾಜಶೇಖರ ಮನಗೂಳಿ,ಸಂದೀಪ್ ಬಿದರಕೊಟಿ, ಸಾಗರ ಉಕ್ಕಲಿ, ಮಹಾಂತೇಶ ಮಾಗಿ,ಮಹಾಂತೇಶ ಕಟ್ಟಿಮನಿ, ಬಸವರಾಜ ಮನಗೂಳಿ,ನಾಗೇಶ ಅಂಬಿಗೇರ,ಭೀಮು ಅಂಬಿಗೇರ, ಮಲ್ಲಿಕಾರ್ಜುನ ಬಡಿಗೇರ ಸೈನಿಕರು,ಲಕ್ಷಣ ಉಕ್ಕಲಿ, ಬಸವರಾಜ ರಾಮೊಡಗಿ,ಉಮೇಶ ಅಂಬಿಗೇರ, ಸೇರಿದಂತೆ ತಾಲ್ಲೂಕಿನ ಎಲ್ಲ ಸಮಾಜ ಬಾಂಧವರು ಮಹಿಳೆಯರು ಮಕ್ಕಳು ಸೇರಿದಂತೆ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಸಂಗಮೇಶ ಶಿವಣಗಿ ತಂಡದಿಂದ ಪ್ರಾರ್ಥಿಸಿದರು. ಎಚ್.ಎಮ್.ನಾಟಿಕಾರ,ಅಯ್ಯಪ್ಪ ತಂಗಡಗಿ ಸ್ವಾಗತಿಸಿದರು, ಬಿ.ವಾಯ್.ನಾಟಿಕಾರ ನಿರೂಪಿಸಿ ವಂದಿಸಿದರು.