• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

    ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

    ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

    ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

    ಹೋರಾಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನಿ.

    ಹೋರಾಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನಿ.

    ಇಂಡಿಯಲ್ಲಿ ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರನ್ನು ಚೆಸ್ ಮಾಡಿದ ಅನ್ನದಾತ..!

    ಇಂಡಿಯಲ್ಲಿ ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರನ್ನು ಚೆಸ್ ಮಾಡಿದ ಅನ್ನದಾತ..!

    ಮನೆಗೆ ಐದು ಗ್ಯಾರಂಟಿ – ಮನೆಗೊಂದು ರಂಗೋಲಿ

    ಮನೆಗೆ ಐದು ಗ್ಯಾರಂಟಿ – ಮನೆಗೊಂದು ರಂಗೋಲಿ

    ಸಿಬ್ಬಂದಿ ಕೊರತೆಯಿಂದ ಆಧಾರ್ ಸೇವೆ ಸ್ಥಗಿತ – ಮುದ್ದೇಬಿಹಾಳದಲ್ಲಿ ಮೂರು ತಿಂಗಳಿಂದ ಜನಸಾಮಾನ್ಯರ ಪರದಾಟ.

    ಸಿಬ್ಬಂದಿ ಕೊರತೆಯಿಂದ ಆಧಾರ್ ಸೇವೆ ಸ್ಥಗಿತ – ಮುದ್ದೇಬಿಹಾಳದಲ್ಲಿ ಮೂರು ತಿಂಗಳಿಂದ ಜನಸಾಮಾನ್ಯರ ಪರದಾಟ.

    28 ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು..!

    28 ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು..!

    ಸ್ಥಳೀಯ ಭಾಷೆ–ಸಂಸ್ಕೃತಿಯನ್ನು ಸಂರಕ್ಷಿಸಿ..!

    ಸ್ಥಳೀಯ ಭಾಷೆ–ಸಂಸ್ಕೃತಿಯನ್ನು ಸಂರಕ್ಷಿಸಿ..!

    ಜ.9ರಂದು ಮುಖ್ಯಮಂತ್ರಿಗಳಿಂದ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

    ಜ.9ರಂದು ಮುಖ್ಯಮಂತ್ರಿಗಳಿಂದ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

      ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

      ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

      ಹಿಂದೂ ಸಮಾಜದ ಏಕತೆಗೆ ಸಂಘಟಿತವಾಗಲು ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ

      ಹೋರಾಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನಿ.

      ಹೋರಾಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನಿ.

      ಇಂಡಿಯಲ್ಲಿ ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರನ್ನು ಚೆಸ್ ಮಾಡಿದ ಅನ್ನದಾತ..!

      ಇಂಡಿಯಲ್ಲಿ ಸಿನಿಮಿಯ ರೀತಿಯಲ್ಲಿ ಕುರಿ ಕದ್ದ ಕಳ್ಳರನ್ನು ಚೆಸ್ ಮಾಡಿದ ಅನ್ನದಾತ..!

      ಮನೆಗೆ ಐದು ಗ್ಯಾರಂಟಿ – ಮನೆಗೊಂದು ರಂಗೋಲಿ

      ಮನೆಗೆ ಐದು ಗ್ಯಾರಂಟಿ – ಮನೆಗೊಂದು ರಂಗೋಲಿ

      ಸಿಬ್ಬಂದಿ ಕೊರತೆಯಿಂದ ಆಧಾರ್ ಸೇವೆ ಸ್ಥಗಿತ – ಮುದ್ದೇಬಿಹಾಳದಲ್ಲಿ ಮೂರು ತಿಂಗಳಿಂದ ಜನಸಾಮಾನ್ಯರ ಪರದಾಟ.

      ಸಿಬ್ಬಂದಿ ಕೊರತೆಯಿಂದ ಆಧಾರ್ ಸೇವೆ ಸ್ಥಗಿತ – ಮುದ್ದೇಬಿಹಾಳದಲ್ಲಿ ಮೂರು ತಿಂಗಳಿಂದ ಜನಸಾಮಾನ್ಯರ ಪರದಾಟ.

      28 ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು..!

      28 ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು..!

      ಸ್ಥಳೀಯ ಭಾಷೆ–ಸಂಸ್ಕೃತಿಯನ್ನು ಸಂರಕ್ಷಿಸಿ..!

      ಸ್ಥಳೀಯ ಭಾಷೆ–ಸಂಸ್ಕೃತಿಯನ್ನು ಸಂರಕ್ಷಿಸಿ..!

      ಜ.9ರಂದು ಮುಖ್ಯಮಂತ್ರಿಗಳಿಂದ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

      ಜ.9ರಂದು ಮುಖ್ಯಮಂತ್ರಿಗಳಿಂದ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸ್ಥಳೀಯ

      ಈ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಸೇವೆ ಅನನ್ಯ: ಶಾಸಕ ಎಮ್ ಆರ್ ಮಂಜುನಾಥ್

      Voiceofjanata.in

      September 21, 2024
      0
      ಈ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಸೇವೆ ಅನನ್ಯ: ಶಾಸಕ ಎಮ್ ಆರ್ ಮಂಜುನಾಥ್
      0
      SHARES
      300
      VIEWS
      Share on FacebookShare on TwitterShare on whatsappShare on telegramShare on Mail

      ಈ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಸೇವೆ ಅನನ್ಯ: ಶಾಸಕ ಎಮ್ ಆರ್ ಮಂಜುನಾಥ್

       

      ಹನೂರು: ಸರ್ವ ಶ್ರೇಷ್ಠ ಚಿಂತಕರು ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಆದರ್ಶವಾದಿ ತತ್ವಜ್ಞಾನಿಗಳ ಚಿಂತನೆಯನ್ನು ಭಾರತೀಯ ಚಿಂತನೆಗೆ ಪರಿಚಿಸಿದವರು. ಅವರು ಪ್ರಸಿದ್ಧ ಶಿಕ್ಷಕರಾಗಿದ್ದರು ಅವರ ಜನ್ಮ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಎಂಆರ್ ಮಂಜುನಾಥ್ ರವರು ತಿಳಿಸಿದರು.

       

      ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಂಆರ್ ಮಂಜುನಾಥ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮುಮ್ತಾಜ್ ಬೇಗಂ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

      ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂಆರ್ ಮಂಜುನಾಥ ಆದರ್ಶ ಶಿಕ್ಷಕರಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ನೆನೆಯಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದವರು. ಸಮಾಜ ನಿರ್ಮಾಣ ಮಾಡುವ ಕಾರ್ಯಗಳಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರಾಗಿರುತ್ತಾರೆ. ಶಿಕ್ಷಕರನ್ನು ನಾವು ಯಾವ ಸಂದರ್ಭದಲ್ಲಿ ಮರೆಯಬಾರದು. ಶಾಲೆಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುತ್ತೇನೆ. ಗುಡ್ಡಗಾಡು ಪ್ರದೇಶಗಳಲ್ಲಿನ ಶಿಕ್ಷಕರ ಸೇವೆ ಅನನ್ಯವಾದದ್ದು. ಪ್ರತಿ ಶಾಲೆಗಳಿಗೂ ಭೇಟಿಕೊಟ್ಟು ಶಾಲೆಗೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಯಾವುದೇ ಶಿಕ್ಷಕರ ಸಮಸ್ಯೆಗಳಿದ್ದರೂ ನಾನು ಬಗೆಹರಿಸಿಕೊಡುತ್ತೇನೆ. ನಿಮ್ಮ ಮನವಿ ಶಿಕ್ಷಕರ ಭವನ ನಿರ್ಮಾಣಕ್ಕೆ ತಹಸಿಲ್ದಾರ್ ಜೊತೆ ಮಾತನಾಡಿದ್ದು ಆದಷ್ಟು ಬೇಗ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದರು.

      ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಬಿ ಎಸ್ ವಿನಯ್ ರವರು ಮಾತನಾಡಿ ಹನೂರು ಭಾಗದಲ್ಲಿ ಸ್ವತಂತ್ರ ಪೂರ್ವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಿದ್ದರು ಎಂದು ಸಾಹಿತಿಗಳಾದ ಕೃಷ್ಣಮೂರ್ತಿ ರವರು ಹೇಳಿದ್ದಾರೆ. ಅಕ್ಷರವನ್ನು ಕಲಿಸಿದವರನ್ನೇ ಗುರು ಎಂದು ಕರೆಯುತ್ತೇವೆ, ಇಂದು ಜನ ಮಾನಸದಲ್ಲಿ ಶಿಕ್ಷಕರಗಳನ್ನು ಗುರುಗಳು ಎಂದು ಕರೆಯಲಾಗುತ್ತದೆ. ವಿದ್ಯೆಯಲ್ಲಿ ವಿನಯ ಹಾಗೂ ಸಮಾಜವನ್ನು ತಿದ್ದುವ ಹೊಣೆಗಾರಿಕೆ ಶಿಕ್ಷಕರಿಗೆ ಇರುತ್ತದೆ. ಅಂದು ಶಿಕ್ಷಕರಿಂದ ಕೋಲನ್ನು ಕಿತ್ತು ಕೊಳ್ಳಲಾಯಿತು, ಆವಾಗ ಪೊಲೀಸರ ಕೈಯಲ್ಲಿ ಕೋಲು ಹಿಡಿಯಬೇಕಾದ ಸಮಯ ಬಂದಿದೆ. ಈ ತಾಲೂಕಿನಲ್ಲಿ ಶಿಕ್ಷಕರು ತುಂಬಾ ದೂರ ಪ್ರಯಾಣ ಮಾಡಬೇಕು, ರಸ್ತೆ ಸರಿ ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಕಾಡು ಪ್ರಾಣಿಗಳ ಹಾವಳಿ ಆದರೂ ಇದೆಲ್ಲವನ್ನು ದಾಟಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

      ಶಿಕ್ಷಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ 2024 ರಲ್ಲಿ ನಿವೃತ್ತಗೊಂಡಂತಹ 20 ಶಿಕ್ಷಕರಿಗೆ ಸನ್ಮಾನಿಸಲಾಯಿತು.
      ಪ್ರೌಢಶಾಲಾ ವಿಭಾಗದಲ್ಲಿ ಅಮಲ್ ದಾಸ್, ನಾಗಣ್ಣ, ಮ್ಯಾಕ್ಸಿ ಗೋವಿಯಸ್, ನೀರೇಶ್, ಪಿ ತಮ್ಮಯ್ಯ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ವೆಂಕಟರಾಜು, ಕದರಯ್ಯ, ಬಾಬು, ತೋಮಿಯನ್, ರಾಜಮ್ಮ, ರತ್ನಮ್ಮ, ಶಾಂತಿ, ಪುಷ್ಪರಾಣಿ ,ನವಮಣಿ, ಮೇರಿ, ವಸಂತಕುಮಾರಿ, ನಟರಾಜು, ಪ್ರಸಾದ್, ಪಾಲಿನ್, ರಾಣಿ, ಶಿಕ್ಷಕರಿಗೆ ಶಾಸಕ ಎಂಆರ್ ಮಂಜುನಾಥ್ ರವರು ಸನ್ಮಾನಿಸಿದರು.

      ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರಿಗೆ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ಜಯಗಳಿಸಿದ ಶಿಕ್ಷಕರಿಗೆ ಬಹುಮಾನವನ್ನು ಶಾಸಕ ಎಂಆರ್ ಮಂಜುನಾಥ್ ರವರು ವಿತರಿಸಿದರು.

      ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮುಮ್ತಾಜ್ ಬೇಗಮ್, ಪಟ್ಟಣ ಪಂಚಾಯತಿ ಸದಸ್ಯರಾದ ಮಹೇಶ್, ಹರೀಶ್, ಸಂಪತ್, ಶ್ರೀಮತಿ ಪವಿತ್ರ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಜೆಸ್ಸಿಂ ಪಾಶ, ಜಿಲ್ಲಾ ಯೋಜನಾ ಸಹಾಯಕ ನಿರ್ದೇಶಕರಾದ ನಾಗೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜು,ಕ.ರಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಕೃಷ್ಣೇಗೌಡ, ಶಿಕ್ಷಕರಾದ ಮಹದೇವ್, ಚಿನ್ನ ಪೇಯ, ಮಹೇಶ್ ,ಅಶೋಕ್, ರಮೇಶ್ ಹಾಗೂ ಶಿಕ್ಷಕ ವೃಂದದವರು ಮತ್ತು ಹಲವು ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

       

      ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ

      Tags: #Chamarajanager#MLA MR manjuanath#Public News#Service of teachers in this hilly area is unique: MLA M R Manjunath#ಈ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಸೇವೆ ಅನನ್ಯ: ಶಾಸಕ ಎಮ್ ಆರ್ ಮಂಜುನಾಥ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      0
      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      ಉತ್ತಮ ಕಾರ್ಯಕ್ಕೆ “ಶಂಕರಲಿಂಗ ಕುಂಬಾರ್” ಪೋಲಿಸ್ ಆಯುಕ್ತರಿಂದ ಪ್ರಶಂಸಾ ಪತ್ರ

      January 9, 2026
      ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ

      ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ

      January 9, 2026
      ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

      ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಭೆ ಸಹಕಾರಿ-ಬಸವರಾಜ ಮಾದನಶೆಟ್ಟಿ

      January 9, 2026
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.