ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿಯವರ ಕಾಲದಲ್ಲಿ ಕಾಮಗಾರಿಗಳಿಗೆ ನಮ್ಮ ಶಾಸಕರು ಎಲ್ಲಿಯೂ ಭೂಮಿ ಪೂಜೆ ಮಾಡಿಲ್ಲ. ಬಸ್ಟ್ಯಾಂಡ್ ಮಾಡಿದ್ದು ನಾನು ಎಂದು ಹೇಳಿಕೊಂಡಿಲ್ಲ. ಬದಲಿಗೆ ಬಸ್ ಡಿಪೋ ಮಾಡಿರುವುದು ನಾನು ಎಂದಿದ್ದಾರೆ. ಬಿಜೆಪಿಯವರಿಗೆ ತಮ್ಮಿಂದಲೋ ಹೇಳಿಕೊಳ್ಳುವಷ್ಟು ಯೋಜನೆಗಳು ಆಗದೆ ಇರುವದರಿಂದ್ದ ಹತ್ತಾಶೇ ಭಾವನೆಯಿಂದ ಶಾಸಕರ ಅಭಿವೃದ್ದಿ ಕೆಲಸಗಳು ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಶಾಸಕರು ಮತಕ್ಷೇತ್ರದಲ್ಲಿ ಸರ್ವಜನ ಶಾಂತಿಯ ತೋಟ ಎನ್ನುವಂತೆ ಶಾಂತಿ, ಪ್ರೀತಿ ಸಾಮರಸ್ಯದಿಂದ ಅಭಿವೃದ್ದಿ ಚಿಂತನೆಗಳನ್ನು ಸಮ-ಸಮಾಜದ ಕಲ್ಪನೆಯಿಂದ ಅಧಿಕಾರ ನಡೆಸುತ್ತಿದ್ದಾರೆ ಹೊರತ್ತೂ ಯಾವುದೇ ರೀತಿಯ ಪಕ್ಷ ಪಾತ ಮಾಡಿಲ್ಲ ವಿನಾಕಾರಣ ಆರೋಪ ಮಾಡುವುದು ಶೋಭೆಯಲ್ಲ ಎಂದರು.
ಪುರಸಭೆ ಅಧಿಕಾರ ಆಮೀಶೆ ತೋರಿಸಿ ಹಿಡಿದಿದ್ದೀರಿ ಎಂದಿರುವ ನೀವು, ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ನೀವು ನಿಮ್ಮ ಪಕ್ಷದ ಸದಸ್ಯರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಅಸಮರ್ಥರಾಗಿದ್ದೀರಿ ಎಂದು ಆರ್ಥ. ನಾವು ಯಾವುದೇ ಆಶೇ ಆಮೀಷ ತೊರಿಸಿಲ್ಲ ಶಾಸಕರ ಮಾನವೀಯ ಮೌಲ್ಯ ಸರ್ವಜನಾಂಗ ಪ್ರೀತಿಸುವ ವೈವಿಧಾನ ಮತ್ತು ಅಭಿವೃದ್ದಿಯ ಚಿಂತನೆಗಳನ್ನು ಸ್ವ ಇಚ್ಚೇಯಿಂದ ಬೆಂಬಲಿಸಿದ್ದಾರೆ ಅವರಿಗೆ ಶಾಸಕರ ಒತ್ತಾಯ ಮಾಡಿಲ್ಲ. ನಮ್ಮಲ್ಲಿಗೆ ತಾವಾಗಿ ಬಂದಿರುವದರಿಂದ ಪುರಸಭೆ ಅಧಿಕಾರ ಹಿಡಿದಿದ್ದು ನಿಜ.
© 2025 VOJNews - Powered By Kalahamsa Infotech Private Limited.