ಅ – 18 ರಂದು ಪತ್ರಿಕಾ ದಿನಾಚರಣೆ : ಅಧ್ಯಕ್ಷ ಬಂಗಾರಪ್ಪ .
ಹನೂರು : ಪ್ರತಿವರ್ಷದಂತೆ ಪತ್ರಕರ್ತರ ದಿನಾಚರಣೆ ಆಚರಿಸುವುದು ವಾಡಿಕೆ ಅದರಂತೆಯೇ ದಿನಾಂಕ 18-8-24 ರಂದು ಭಾನುವಾರ ನಮ್ಮ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಕಲ್ಯಾಣ ಮಂಟಪದಲ್ಲಿ ಸಮಯ ಬೆಳಿಗ್ಗೆ 10:30 ಗಂಟೆಗೆ ಪತ್ರಿಕಾ ದಿನಾಚರಣೆ ಆರಂಭವಾಗುತ್ತದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಸಿ . ತಿಳಿಸಿದರು .
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮನುಷ್ಯನ ದಿನಚರಿ ಪ್ರಾರಂಭವಾಗುವುದೆ ದಿನ ಪತ್ರಿಕೆಗಳನ್ನು ಓದುವುದರಿಂದ ಅಂತಹ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಪತ್ರಕರ್ತರ ದಿನಾಚರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವೆ ಸರಿ,ಇದೇ ಭಾನುವಾರವು ನಡೆಯುವ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಸಾಲೂರು ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮೀಜಿಗಳು ವಹಿಸಲಿದ್ದಾರೆ .ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಶ್ರೀಯುತ ಎಂ ಆರ್ ಮಂಜುನಾಥ್ ರವರು ನೆರವೇರಿಸಿಕೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಶ್ರೀಯುತ ಬಂಗಾರಪ್ಪ ,ಸಿ ರವರು ವಹಿಸಲಿದ್ದಾರೆ.ಹಾಗೂ ಮುಖ್ಯ ಭಾಷಣಕಾರರಾಗಿ ರಾಮನಗರ ಟೈಮ್ಸ್ ಪತ್ರಿಕೆ ಸಂಪಾದಕರು ಹಾಗೂ ರಾಮನಗರ ಕ ಪ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಪ್ರಕಾಶ್ ಎಮ್ ಹೆಚ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಶ್ರೀಯುತ ಆರ್ ನರೇಂದ್ರರವರು ,ಶ್ರೀ ಮತಿ ಶ್ರೀ ಪರಿಮಳ ನಾಗಪ್ಪರವರು ,ಹಾಗೂ ಡಾ ದತ್ತೇಶ್ ಕುಮಾರ್ ರವರು ಕಾರ್ಯದರ್ಶಿ ಮಾನಸ ಶಿಕ್ಷಣ ಸಂಸ್ಥೆ ಕೊಳ್ಳೇಗಾಲ , ಬಿಜೆಪಿ ಮುಖಾಂಡರಾದ ಡಾಪ್ರೀತನ್ ನಾಗಪ್ಪರವರು, ರಘು ಎಇ ಕಾರ್ಯದರ್ಶಿ ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ, ಜನಧ್ವನಿ
ಬಿ ವೆಂಕಟೇಶ್ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರು, ರೋಷನ್ ಬಾಬುರವರು ಕ್ರಿಸ್ತರಾಜ ವಿದ್ಯಾಸಂಸ್ಥೆಗಳು ,ರೈತ ಸಂಘದ ಹನೂರು ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ರೈತ ಮುಖಂಡರುಗಳು ,ಪತ್ರಿಕ ಸಂಪಾದಕರುಗಳು ಸೇರಿದಂತೆ ಹಲವು ಗಣ್ಯರು ,ಸಾಧಕರು ,ಪತ್ರಿಕ ಮಿತ್ರರು ಆಗಮಿಸಲಿದ್ದಾರೆ ಎಂದು ತಿಳಿಸಿದರು .
ಈ ಸಮಯದಲ್ಲಿ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಗುವುದು . ದಾನಿಗಳ ಸಹಾಯದಿಂದ ಕಾಡಂಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಮಾಡಲಾಗುತ್ತದೆ ,ಸಕಾಲಕ್ಕೆ ಸಾರ್ವಜನಿಕರು ಸೇರಿದಂತೆ ಪತ್ರಿಕ ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡ ಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಸಂಘದ ಉಪಾಧ್ಯಕ್ಷರಾದ ಸತೀಶ್ ಕುಮಾರ್ , ಕಾರ್ಯದರ್ಶಿ ಬಸವರಾಜು ಕಾಂಚಳ್ಳಿ ,ಖಜಾಂಚಿಗಳಾದ ಚೇತನ್ ಕುಮಾರ್ ಎಲ್, ಸಂಘಟನೆ ಕಾರ್ಯದರ್ಶಿ ಶಾರುಖ್ ಖಾನ್ , ನಿರ್ದೇಶಕರುಗಳಾದ ಪ್ರಸನ್ನ, ಅಜಿತ್ ,ನಾಗೇಂದ್ರ ಎನ್ ,ಸದಸ್ಯರುಗಳಾದ ವಿಲಿಯಂ ,ಕಾರ್ತಿಕ್ ,ರವಿಗೌಡ ,ಎಸ್ .ರವಿ. ಹಾಜರಿದ್ದರು
ವರದಿ : ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ