ಅ-20 ರಂದು ಡಿ.ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆ
ಇಂಡಿ : ಕರ್ನಾಟಕದ ಅಭಿವೃದ್ಧಿಯ ಹರಿಕಾರರೆಂದೆ ಕರೆಯಲ್ಪಡುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜಯಂತಿಯನ್ನು ಆಗಷ್ಟ್ 20 ರಂದು ತಾಲೂಕ ಆಡಳಿತ ದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸಿಲ್ದಾರ್ ಬಿ.ಎಸ್ ಕಡಕಭಾವಿ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ತಹಸಿಲ್ದಾರ್ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,20 ರಂದು ಬೆಳಿಗ್ಗೆ ಎಲ್ಲಾ ಕಚೇರಿ,ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಿ,ನಂತರ 10 ಗಂಟೆಗೆ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಪ್ಪದೆ ಭಾಗವಹಿಸುವಂತೆ ಕರೆ ನೀಡಿದರು.
ಆ ನಂತರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಗುರುಭವನದಲ್ಲಿ ಜರುಗುವ ಡಿ. ದೇವರಾಜ ಅರಸು ಜಯಂತಿ ಪ್ರಯುಕ್ತ ವಿವಿಧ ಇಲಾಖೆಗಳಿಗೆ ಒಪ್ಪಿಸಿದ ಜವಾಬ್ದಾರಿ ಕಾರ್ಯಗಳನ್ನು ಚಾಚು ತಪ್ಪದೆ ಪಾಲಿಸಬೇಕು. ವೇದಿಕೆ ಅಲಂಕಾರ, ಅಹ್ವಾನ ಪತ್ರಿಕೆ, ಅಲ್ಪ ಉಪಹಾರ ಹಾಗೂ ಉಪನ್ಯಾಸಕರ ಅಹ್ವಾನ ಜೊತೆಗೆ ಇತರೆ ಕಾರ್ಯಗಳು ಯಾವುದೇ ರೀತಿಯ ತೊಂದರೆಯಾಗದಂತೆ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಮಾತನಾಡಿ, ನಿಗದಿತ ಸಮಯಕ್ಕೆ ಪೂರ್ವಭಾವಿ ಸಭೆ ನಡೆಯದೆ ವಿಳಂಭ ಹಾಗೂ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಅನುಪಸ್ಥಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅದಲ್ಲದೇ ಪಟ್ಟಣದ ಕೇಂದ್ರ ಬಿಂದುವಿನ ಬಾಜಾರದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ವೃತಕ್ಕೆ ಹೊಸ ಕಾಯಕಲ್ಪ ನೀಡುತ್ತೀರುವುದು ಹರ್ಷದ ಸಂಗತಿ, ಆದರೆ ಕಳಪೆ ಕಾಮಗಾರಿ ಮಾಡಿದ್ದರ ಫಲವಾಗಿ ಒಂದೇ ದಿನದಲ್ಲೆ ವೃತ್ ಮುರಿದು ಬಿದ್ದಿದ್ದು ನೋವಾಗಿದೆ. ಇನ್ನೂ ಇಲ್ಲಿಯವರೆಗೆ ನಡೆದಿರುವ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದರು. ಸ್ವತಂತ್ರ ದಿನಾಚರಣೆಗೆ ಕೇವಲ 2 ದಿನಗಳು ಬಾಕಿ ಉಳಿದಿವೆ. ಅದಕ್ಕಾಗಿ ಯಾವುದೇ ಸಮಸ್ಯೆಯಾಗದಂತೆ, ಪ್ರತಿವರ್ಷದಂತೆ ಮಹಾತ್ಮ ಗಾಂಧಿಜಿಯವರ ವೃತ್ ದಲ್ಲಿಯೂ ಸಹ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಒಬಿಸಿ ತಾಲೂಕು ಅಧಿಕಾರಿ ಎಸ್ ಆರ್ ಗದ್ಯಾಳ, ಕೃಷಿ ಇಲಾಖೆ ಅಧಿಕಾರಿ ಮಹಾದೇವ ಏವೂರ, ಶಿರಸ್ತೆದಾರ ಬಿ ಎ ರಾವೂರ ಹಾಗೂ ಇನ್ನೂ ಅನೇಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.