ಮುದ್ದೇಬಿಹಾಳ:ಎಸ್ಸೆಸ್ಸೆಲ್ಸಿ ಪರೀಕ್ಷೆ-೧ರ ಆಂಗ್ಲ ಮಾಧ್ಯಮ ವಿಭಾಗದಲ್ಲಿ ೬೨೫ಕ್ಕೆ ೬೨೫ ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಕೀಲ್ಅಹ್ಮದ್ ನಾಸೀರ್ಅಲಿ ನದಾಫ, ಸಂಸ್ಥೆಯ ನಿರ್ದೇಶಕ ಹಾಗೂ ಪ್ರೌಢಶಾಲಾ ಉಸ್ತುವಾರಿ ದರ್ಶನಗೌಡ ಪಾಟೀಲ, ಶಾಲೆಯ ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ್ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶನಿವಾರ ಸನ್ಮಾನಿಸಿ ಆತನ ಮತ್ತು ಶಾಲೆಯ ಸಾಧನೆ ಶ್ಲಾಘಿಸಿದರು. ಅಕೀಲ್ಅಹ್ಮದ್ ಸರ್ಕಾರಿ ಶಿಕ್ಷಕ ದಂಪತಿಯ ಮಗನಾಗಿರುವುದನ್ನು ಅರಿತ ಅವರು ಗ್ರಾಮೀಣ ಭಾಗದ ಶಾಲೆಯೊಂದು ರಾಜ್ಯಮಟ್ಟದ ಸಾಧನೆ ಮಾಡಿರುವುದು ಶ್ಲಾಘನೀಯ. ರಾಜ್ಯಾದ್ಯಂತ ೨೨ ವಿದ್ಯಾರ್ಥಿಗಳು ಈ ಬಾರಿ ೬೨೫ಕ್ಕೆ ೬೨೫ ಅಂಕ ಪಡೆದಿರುವುದು ಶಿಕ್ಷಣದ ಗುಣಮಟ್ಟಕ್ಕೆ ಕನ್ನಡಿಯಾಗಿದೆ ಎಂದರು.
ಇದೇ ವೇಳೆ ದರ್ಶನಗೌಡ ಪಾಟೀಲ, ಇಸ್ಮಾಯಿಲ್ ಮನಿಯಾರ್ ಅವರು ಸಂಸ್ಥೆಯ ಪರವಾಗಿ ಸಚಿವರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು. ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಡಿಡಿಪಿಐ ತಸ್ಮೀಮಾಬಾನು ಕೊಲ್ಹಾರ, ಬಿಇಓ ಬಿ.ಎಸ್.ಸಾವಳಗಿ, ತಾಪಂ ಇಓ ನಿಂಗಪ್ಪ ಮಸಳಿ, ಪಶು ಸಂಗೋಪನೆ ಎಡಿ ಡಾ.ಶಿವಾನಂದ ಮೇಟಿ, ಸಿಡಿಪಿಓ ಶಿವಮೂರ್ತಿ ಕುಂಬಾರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರಡಗಿ, ಶಿಕ್ಷಕ ನಾಸೀರ್ಅಲಿ ಪಿಂಜಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡರಾದ ಎಂ.ಬಿ.ನಾವದಗಿ, ಸಂತೋಷ ಚವ್ಹಾಣ ಸೇರಿದಂತೆ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅಕೀಲ್ಅಹ್ಮದ್ ನದಾಫ, ಆಕ್ಸಫರ್ಡ್ ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ ಅವರನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು. ಶಾಸಕ ಸಿ.ಎಸ್.ನಾಡಗೌಡ ಇನ್ನಿತರರು ಇದ್ದಾರೆ.