ಇಂಡಿ : ನಗರದ ಜೆಡಿಎಸ್ ಕಚೇರಿಯಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ನಾನಾಗೌಡ ಬಿರಾದಾರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ವೇಳೆಯಲ್ಲಿ ಮಾತನಾಡಿದ ಅವರು, 2023ಕ್ಕೆ ಶ್ರೀಸಾಮಾನ್ಯನ ಪರವಾದ ಸರ್ಕಾರ ನಿರ್ಮಿಸಿ ಬಡವರ ಕಲ್ಯಾಣಕ್ಕಾಗಿ ಶ್ರಮಿಸುವ ಜನತಾದಳ ಪ್ರಾದೇಶಿಕ ಪಕ್ಷದ ಸಂಕಲ್ಪವಾಗಿದೆ ಎಂದರು.
ತಾಲೂಕಾ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಜನತಾ ಜಲಧಾರೆ ಕಾರ್ಯಕ್ರಮ ಮುಖಾಂತರ ಕನ್ನಡ ನಾಡಿನ ಕುಡಿಯುವ ನೀರು ಹಾಗೂ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮಹಾಸಂಕಲ್ಪ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಮಾಡಿಲ್ಲ. ಈ ಬಾರಿ ಪ್ರಾದೇಶಿಕ ಪಕ್ಷದ ಸರ್ಕಾರ ರಚನೆಗೆ ನಾಡಿನ ಜನತೆ ನಿರ್ಧರಿಸಬೇಕೆಂದು ವಿನಂತಿ ಮಾಡಿಕೊಂಡರು.
ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕಾರ , ಮರೆಪ್ಪ ಗಿರಣಿವಡ್ಡರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಪೀರಪ್ಪ ಹೂಟಗಾರ, ವಸಂತ ಚೌವ್ಹಾಣ್ ಮಹಿಬೂಬ ಬೇವನೂರ, ನಿಯಾಝ್ ಅಗರಖೇಡ, ರಾಜು ಮುಲ್ಲಾ, ಬಾಳು ರಾಠೋಡ, ಪೀರೋಜ ಶೇಖ್ ಮಹಿಳಾ ಮುಖಂಡರಾದ, ಪಿರ್ದೂಶ ಸುನೇವಾಲೆ ಮುಂತಾದ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಬಿ ಡಿ ಪಾಟೀಲರ ನಾಯಕತ್ವ ಮೆಚ್ಚಿ ಪಕ್ಷ ಸೇರ್ಪಡೆಗೋಂಡ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಮ್ ವಿ ಕಾಂಬಳೆ, ಧರ್ಮಣ ಹೂಗಾರ, ಮಾಳಪ್ಪ ಉಮರಾಣಿ, ಸಂತೋಷ ರಾಠೋಡ, ಈರಣ್ಣಗೌಡ ಬಿರಾದಾರ ಪಕ್ಷ ಸೇರ್ಪಡೆ ಗೊಂಡ ಇವರನ್ನು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶ್ರೀ ನಾನಾಗೌಡ ಬಿರಾದಾರ ಪಕ್ಷಕ್ಕೆ ಬರಮಾಡಿಕೊಂಡರು.